Wednesday, November 3, 2010

Karunadi kannu

ಕರುಣದಿ ಕಣ್ಣು ತೆರೆಯೆ ಬಾರಮ್ಮ ಸಿರಿಯೆ IIಪII

ಕೊಲ್ಹಾಪುರ ಸಿ೦ಹಾಸನದಿ ಮೆರೆಯುವ ಸಿರೆಯೆ IIಅಪII


ವಿಧಿಭವಾದಿಗಳ ಸದನಗಳಿಗೆ
ಅಭ್ಯು ದಯ ಕಟಾಕ್ಷದಿ ಸುದಯವಸುರಿಸೆ II೧II
shreerayarublogspot.com
ಕಡು ಬೆಡಗಿನ ನಿನ್ನಡಿದಾವರೆಗಳ
ಬಿಡದೆ ಭಜಿಪವರ ಕೋಡು ಸು೦ದರಿಯೆ II೨II


ಸುಂದರಾನ ಅರವಿಂದಮಲ್ಲಿಗೆ
ಮಂದಹಾಸ ಮಕರ೦ದವ ಸುರಿಯೆ II೩II


ಬಡವರಾಭಿ ಷ್ಟೆಯ ಕೋಡುವಳೆ೦ದು
ಬಡಬಡಿಸಿ ಬಂದೆ ನಿನ್ನೊ ಡಲಿನ ಮರಿಯೆ II೪II


ಕೊಟ್ಟರೆ ಕಮಲೇಶವಿಠಲರಾಯನ
ಪಟ್ಟದರಸಿ ಯೋ೦ಬೊ ಕಟ್ಟಲೆ ಕರೆಯೆ II೫II

Kaartika Maasagalalli

ದೀಪಾವಳಿಯ ನರಕ ಚತುದ೯ಶಿ ಶುಭದಿನದಂದು ಬ್ರಾಹ್ಮೀಮು ಹೂತ೯ದಲ್ಲೆದ್ದು ಕಾಮನ ಪಿತನನ್ನು ಸ್ಮರಿಸುತ್ತ ತೈಲಶಾಸ್ತ್ರ ಮಾಡುವುದು .

ಕಾತಿ೯ಕ ಮಾಸಗಳಲ್ಲಿ ಕಾಮನಪಿತನ ಪೂಜಿಸೆ IIಪII


ಕಾತಿ೯ಕ ಮಾಸಗಳಲ್ಲಿ ಕಾಮನ ಪಿತನ ಪೂಜಿಸಲುI
ಮಾಸಾಭಿಮಾನಿ ದಾಮೋದರನ ಭಜಿಸಿI
ಲೇಸು ಸ೦ಪಿಗೆ ಗ೦ಧೆಣ್ಣೆ ಸಮಪಿ೯ಸಿI
ಆ ಪುಣ್ಯ ಪುರುಷೋತ್ತಮನ ಕೊ೦ಡಾದುತI
ತೈಲ ಶಾಸ್ತ್ರವ ರಚಿಸಿ II೧II

ಪುಣ್ಯ ಸಾಧನದ ಜನರೆಲ್ಲ I ಬ್ರಾಹ್ಮೀಮೂಹೂತ೯ದ ಲೆದ್ದುII
ಚೆನ್ನಾಗಿ ಗೋವುಗಳ ತುಳಸಿ ಪೂಜೆಯಮಾಡಿ I
ಕಮ್ಮೆಣ್ಣೆ ಕಸ್ತೂರಿ ಕಪೂ೯ರ ವಿಳ್ಯವನಿತ್ತು I
ಪನ್ನ೦ಗಶಯನನ ಪಾದಕೆ ಸಮಪಿ೯ಸಿ I
ಗೋಪಿ - ಚಿನ್ನದಾರುತಿಯಬೆಳಗಿರೆ II೨II

ಸೃಷ್ಟಿಗೆ ಕತೃ೯ ಶ್ರೀಹರಿಯI
ಸೃಷ್ಟಿಸಿದನು ದೀಪಾವಳಿಯುI
ಉತ್ತಮ ಚತುದು೯ಶಿ ದಿನದಲಿ ಬಂದುI
ಮತ್ತೆ ನರಕಾಸುರನ ವಧಮಾಡಿ ಬಂದುI
ಉತ್ತಮ ಧರೆಗಿಳಿದ ಕೃಷ್ಣಹಯವದನಗೆ
ಮುತ್ತಿನಾರುತಿಯ ಬೇಳಗಿರೆ II೩II