Thursday, April 15, 2010

Apamrityu parihariso

ಅಪಮೃತ್ಯು ಪರಿಹರಿಸೂ ಅನಿಲದೇವ
ಕೃಪಣವತ್ಸಲನೆ ಕಾವರ ಕಾಣೆ ಜಗದೊಳಗೆ

ನಿನಗಿನ್ನು ಸಮರಾದ ಅನಿಮಿತ್ತ ಬಾ೦ಧವರು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನವು ಎಮ್ಮನು ಉದಾಸಿನ ಮಾಡುವುದು
ಅನುಚಿತವು ಜಗದಿ ಸಜ್ಜನ ಶಿಖಾಮಣಿಯೆ II೧II

ಕರಣಾಭಿಮಾನಿಗಳ ಕಿ೦ಕರರು ಮೂಲೋ೯ಕದರಸು
ಹರಿಯು ನಿನ್ನೋಳಗಿಪ್ಪ ಸರ್ವಕಾಲ
ಪರಿಸರನೆ ಈ ಭಾಗ್ಯ ದೂರೆತನಕೆ ಸರಿಯು೦ತೆ
ಗುರುವಯ೯ ನೀ ದಯಾಕರನೆ೦ದು ಪ್ರಾಥಿ೯ಸುವೆ II೨II

ಭವ ರೋಗ ಮೂಚಕನೆ ಪವಮಾನರಾಯ ನಿ
ನ್ನವರವನು ನಾನು ಮಾಧವಪ್ರಿಯನೆ
ಬಾಧೆಯ ಬಿಡಿಸೂ ಅವನಿಯೂಳು ಸುಜನರಿಗೆ
ದಿವಿಜಗನ ಮಧ್ಯದಲಿ ಪ್ರವರ ನಿನಹುದೂ II3II
®shreerayarublogspot©
ಜ್ಞಾನಾಯುರೂಪಕನು ನಿನಹುದೋ ವಾಣಿ
ಪ೦ಚಾನನಾದ್ಯಮರಿಗೆ ಪ್ರಾಣದೇವ
ದಿನವತ್ಸಲನೆ೦ದು ನಾ ನಿನ್ನ ಮೂರೆಹೊಕ್ಕೆ
ದಾನವಾರಣ್ಯ ಕ್ರುಶಾನು ಸವ೯ದಾ ಎನ್ನ II೪II

ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವಲ್ಲ ಸಾಧು ಪ್ರಿಯನೇ
ವೇದವಾದೂದಿತ ಜಗನ್ನಾಥ ವಿಠಲನ
ಪಾದಭಾಜನೆಯಿತ್ತು ಮೂಡ ಕೋಡು ಸತತII ೫II

Entha balavanthanoo

ಎ೦ಥ ಬಲವ೦ತನೋ ಕು೦ತಿಯ ಸುಜಾತನೂ
ಭಾರತಿಗೆ ಕಾ೦ತನೋ ನಿತ್ಯ ಶ್ರೀ ಮ೦ತನೋ

ರಾಮಚಂದ್ರನ ಪ್ರಾಣನೂ ಅಸುರ ಹೃದಯ ಬಾಣನೂ
ಖಳರ ಗ೦ಟಲ ಗಾಣನೂ ಜಗದೂಳಗೆ ಪ್ರವಿಣನೂ II೧II

ಕು೦ತಿಯ ಕ೦ದನೋ ಸೌ ಗ೦ಧಿಕವ ತ೦ದನೋ
ಕುರುಕ್ಷೇತ್ರ ಕೆ ಬ೦ದನೋ ಕೌರವರ ಕೋ೦ದನೋ II೨II
©shreerayarublogspot©
ಭ೦ಢಿ ಅನ್ನವನು೦ಡನೋ ಬಕನ ಪ್ರಾಣವ ಕೊ೦ದನೋ
ಭೀಮ ಪ್ರಚ೦ಡನೋ ದ್ರೌಪದಿಗೆ ಗ೦ಡನೋ II೩II

ವೈಷ್ಣವಾಗ್ರಗಣ್ಯನೂ ಸ೦ಚಿತಾಗ್ರ ಪುಣ್ಯನೂ
ದೇವವರೆಣ್ಯನೂ ದೇವಷರಣ್ಯನೂ ೪

ಮದ್ವಶಾಸ್ತ್ರವ ರಚಿಸಿದನೂ ಸದ್ವೈಷ್ಣವರ ಸಲಹಿದನೂ
ಉಡುಪಿ ಕೃಷ್ಣನ ನಿಲಿಸಿದನೂ ಪುರಂದರವಿಠಲನ ಒಲಿಸಿದನೆ ೫

kandu kandu nii enna

ಕಂಡು ಕಂಡು ನೀ ಎನ್ನ ಕೈ ಬಿಡುವದೇ ಕೃಷ್ಣ
ಪು೦ಡರೀಕಾಕ್ಷ ಶ್ರೀಪುರುಷೋತ್ತಮ

ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊ೦ದೆನಯ್ಯ ನಿರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎ೦ದೆ೦ದಿಗು ನಿನ್ನ ನ೦ಬಿದೆನೋ ಕೃಷ್ಣ II1II

ಭಕ್ತವತ್ಸಲನೆಂಬ ಬಿರುದು ಪೊತ್ತ ಮೇಲೆ
ಭಕ್ತರಧಿನನಾಗಿರಬೇಡವೆ
ಮುಕ್ತಿದಾಯಕ ನೀನು ಹೊನ್ನೂರುಪುರವಾಸ
ಶಕ್ತಗುರು ಪುರಂದರವಿಠಲ ಶ್ರೀಕೃಷ್ಣ II2II