Friday, April 30, 2010

sharanara surubhuja Gururaaja

ಶರಣರ ಸುರ ಭೂಜ ಗುರುರಾಜ IIಪII

ವರ ಮಂತ್ರಾಲಯ ಪುರಮ೦ದಿರದಿ ತವ ಸು೦ದರ
ಮುನಿ೦ದ್ರಭಾಸ್ಕರಸಮತೇಜ II೧II

ಕಾಮಿತಾಥ೯ಗಳ ಕಾಮಧೇನುವಿನ

ನೇಮ ಮೀರಿಕೊಡುವ ಮಹರಾಜ II೨II
shreerayarublogspot
ಭೇಶಕೋಟಿಸ೦ಕಾಶನಾದ ಕಮ
ಲೇಶವಿಠಲನ ದಾಸನೆ ಸಹಜ II೩II

Sharanara surabhuja Gururaaja IIpaII


varamantralapuramandira tava sundara
munidra bhaskarasamateja II1II

kaamitaathagala kaamadhenuvina
neema miri kooduva maharaaja II2II

bheshakootisamkaashanaada kamalesha
vithlana daasane sahaja II3II

Thursday, April 29, 2010

Esabeku iddu jaisabeeku

ಈಸಬೇಕು ಇದ್ದು ಜೈಸಬೇಕು
ಹೇಸಿಗೆ ಸ೦ಸಾರದಲ್ಲಿ ಆಸೆ ಲೇಶ ಇಡದ್ಹಾ೦ಗೆ IIಪII


ತಾಮರಸ ಜಲದ೦ತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ
ಕಾಮಿತ ಕೈಗೊ೦ಬರೆಲ್ಲ II೧II


ಗೇರು ಹಣ್ಣಿನಲ್ಲಿ ಬೀಜ ಸೇರಿದ೦ತೆ ಸ೦ಸಾರದಿ
ಮೀರಯಾಸೆ ಮಾಡದಲೆ
ಧೀರ ಕೃಷ್ಣನ ಭಕುತರೆಲ್ಲ II೨II


ಮಾ೦ಸದಾಸೆಗೆ ಮತ್ಸ್ಯ ಸಿಲುಕಿ
ಹಿ೦ಸೆಪಡುವ ಪರಿಯೊಳು
ಮೋಸ ಹೋಗದ್ಹಾ೦ಗೆ ಜಗ
ದೀಶ ಪುರಂದರವಿಠಲನ ನೆನೆದು II೩II

Tuesday, April 27, 2010

Manava janma doddadu

ಮಾನವ ಜನ್ಮ ದೊಡ್ಡದು ಅದ
ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ IIಪII

ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ
ಮಣ್ಣು ಮುಕ್ಕಿ ಹುಚ್ಚರಾಗುವರೆ ( ಮರುಳಾಗುವರೆ)
ಹೆಣ್ಣು ಮಣ್ಣಿಗಾಗಿ ಹರಿಯನಾಮಾಮೃತ
ಉಣ್ಣದೆ ಉಪವಾಸ ಇರುವರೇ ಖೋಡಿ II೧II

ಕಾಲನ ದೂತರು ಕಾಲ್ಪಿಡಿದೆಳೆವಾಗ
ತಾಳು ತಾಳೆ೦ದರೆ ತಾಳುವರೆ
ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ
ಹಾಳು (ಸುಳ್ಳಿನ ) ಸ೦ಸಾರದ ಸುಳಿಗೆ ಸಿಕ್ಕಲುಬೇಡಿ II೨II

ಏನು ಕಾರಣ ಯದುಪತಿಯನ್ನು ಮರೆತಿರಿ
ಧನಧಾನ್ಯ ಮಕ್ಕಳು ಸಲಹುವರೆ
ಇನ್ನಾದರು ಏಕೋಭಾವದಿ ಭಜಿಸಿರೋ
ಚೆನ್ನ ಪುರಂದರವಿಠಲರಾಯನ II3II


Maanava janma doddadu ada
haani maadalu beedi hucchappa galira

kannu kaikaal kiwi naalige iralikke
mukki huccharaaguvare ( marulaaguvare)
hennu mannigaagi hariyanaamamruta
unnade upavaasa iruvare khodi

kaalana dootaru kalpididelevaaga
taalu taalendare taaluvare
dhalibaarada munna dharmagalisiroo
haalu ( sullina) samsaarada sulige sikkalu beedi

eenu kaarana yadupatiyannu maretiri
dhanadhanya makkalu salahuvare
innadaru ekoobhaavadi bhajisiroo
chenna purandaravithalaraayana


Yaare Rangana Yaare Krishnana

ಯಾರೇ ರಂಗನ ಯಾರೇ ಕೃಷ್ಣನ
ಯಾರೇ ರಂಗನ ಕರೆಯಬಂದವರು
Yaare rangana yaare krishnana
yaare rangana kareyabandavaru

ಗೋಪಾಲ ಕೃಷ್ಣನ ಪಾಪ ವಿನಾಶನ
ಈ ಪರಿಯಿಂದಲಿ ಕರೆಯಬಂದವರು 1
gopalakrishnana paapavinaashana
eepariyindali kareyabandavaru


ವೇಣು ವಿನೋದನ ಪ್ರಾಣಪ್ರೀಯನ
ಜಾಣೆಯರರಸನ ಕರೆಯಬಂದವರು 2
veenu vinodana pranapriyana
jaaneyararasana kareyabandavaru
shreerayarublogspot
ಕರಿರಾಜವರದನ ಪರಮಪುರುಷನ
ಪುರಂದರವಿಠಲನ ಕರೆಯಬಂದವರು ೩
kariraajavaradana paramapurushana
purandaravithalana kareyabandavaru



Saturday, April 24, 2010

Hari Smarane maadoo

ಹರಿಸ್ಮರಣೆಮಾಡೋ ನಿರ೦ತರ

ಪರಗತಿಗೆ ಇದು ನಿಧಾ೯ರ

ದುರಿತ ಗಜಕ್ಕೆ ಕ೦ಠೀರವನೆನಿಸಿದ
ಶರಣಾಗತ ರಕ್ಷಕ ಪಾವನನಾ II೧II

ಸ್ಮರಣೆಗೈದ ಪ್ರಹಲ್ಲಾದನ ರಕ್ಷಿಸಿದ
ದುರುಳು ಹಿರಣ್ಯಕನುದರವ ಸೀಳಿದII ೨II

ತರುಣಿ ದ್ರೌಪದಿ ಮೂರೆಯಿ ಡಲಾಕ್ಷಣ
ಭರದಿಂದಕ್ಷಯವಿತ್ತ ಮಹಾತ್ಮನ II೩II

shreerayarublogspot

ಅ೦ದು ಅಜಮಿಳ ಕ೦ದನ ಕರೆಯಲು
ಬಂದು ಸಲಹಿ ಆನ೦ದವ ತೋರಿದ II೪II

ಶ್ರೀಪುರಂದರ ವಿಠಲರಾಯನ
ಸೃಷ್ಟಿ ಗೊಡೆಯನ ಮುಟ್ಟಿಭಜಿಸುವ II೫II

Enagu aane Ranga

ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ

ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ II1II
shreerayarublogspot
ತನುಮನಧನದಲ್ಲಿ ವ೦ಚಕನಾದರೆ ಎನಗೆ ಆಣೆ ರಂಗ
ಮನಸ್ಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ II2II

ಕಾಕು ಮನುಜರ ಸ೦ಗದಿ ಮಾಡಿದರೆನಗೆ ಆಣೆ ರಂಗ
ಲೌಕೀಕವ ಬಿಡಿಸದಿದ್ದರೆ ನಿನಗೆ ಆಣೆ II3II

ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆII4II

ಹರಿನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೋಲಿಯದಿದ್ದರೆ ನಿನಗೆ ಆಣೆII5II


Enagu aane ranga ninagu aane
enagu ninagu ebbarigu aane

ninna bittu anyara bhajisidarenage aane ranga
enna nii kai bittu poodare ninage aane

tanumanadhanadalli vanchakanaadare enage aane
manassu ninnalli nilisadiddare ninage aane

kaaku manujara sanga maadidarenage aaane ranga
lowkikava bidisadiddare ninage aane

shishtara sangava madadiddare enage aane ranga
dushtara sangava bidisadiddare ninage aane

Hari ninnashraya maadadiddare enage aane ranga
purandaravithala niinooliyadiddare ninage aane

http://www.kannadaaudio.com/Songs/Compilations/Saththavana-Neralu/Enagu-Aane.ram

Friday, April 23, 2010

Dangurava saari

ಡಂಗುರವ (ಸಾರಿರಯ್ಯ ) ಸಾರಿ ಹರಿಯ ಡಿಂಗರೀಗರೆಲ್ಲರೂ ಭೂ
ಮಂಡಲಕ್ಕೆ ಪಾಂಡುರಂಗ ವಿಠ್ಥಲನೆ ಪರದೈವ ವೆಂದು

ಹರಿಯು ಮುಡಿದ ಹೋವು ಹರಿವಾಣದೊಳಗಿಟ್ಟುಕೊಂಡು
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ II1II



ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಢಂಢಂ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ II2II


shreerayarublogspot

ಇಂತು ಜಗಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಸಂತತ ಶ್ರೀಪುರಂದರವಿಠಲ ಪರದೈವವೆಂದುII3II


Audio Link:
http://www.kannadaaudio.com/Songs/Devotional/SriVidyabhushana/DaasaraKritigalu/DanguravaSaariHariya.ram

Shiva Tandava stotram

ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೆ
ಗಲೇವಲಂಬ್ಯ ಲಮ್ಬಿತಾಂ ಭುಜಂಗತುಂಗಮಾಲಿಕಾಮ್
ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ
ಚಕಾರ ಚಂಡಾಂಡವಂ ತನೊತು ನಃ ಶಿವಃ ಶಿವಮ್ II೧II

ಜಟಾಕಟಾಹಸಂಭ್ರಮಭ್ರಮನ್ನಿಲಿಂಪನಿರ್ಝರೀ
ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ
ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೆ
ಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ II೨II

ಧರಾಧರೇಂದ್ರನಂದಿನೀವಿಲಾಸಬಂಧುಬಂಧುರ
ಸ್ಫುರದ್ದಿಗಂತಸಂತತಿಪ್ರಮೋದಮಾನಮಾನಸೆ
ಕೃಪಾಕಟಾಕ್ಷಧೊರಣೀನಿರುದ್ಧದುರ್ಧರಾಪದಿ
ಕ್ವಚಿದ್ದಿಗಂಬರೇ ಮನೋ ವಿನೋದಮೆತು ವಸ್ತುನಿ II೩II

ಲತಾಭುಜಂಗಪಿಂಗಲಸ್ಫುರತ್ಫಣಾಮಣಿಪ್ರಭಾ
ಕದಂಬಕುಂಕುಮದ್ರವಪ್ರಲಿಪ್ತದಿಗ್ವಧೂಮುಖೆ
ಮದಾಂಧಸಿಂಧುರಸ್ಫುರತ್ತ್ವಗುತ್ತರೀಯಮೆದುರೆ
ಮನೋ ವಿನೋದಮದ್ಭುತಂ ಬಿಭರ್ತು ಭೂತಭರ್ತರಿ II೪II

ಸಹಸ್ರಲೋಚನಪ್ರಭೃತ್ಯಶೇಷಲೇಖಶೇಖರ
ಪ್ರಸೂನಧೂಲಿಧೋರಣೀ ವಿಧೂಸರಾಂಘ್ರಿಪೀಠಭೂಃ
ಭುಜಂಗರಾಜಮಾಲಯ ನಿಬದ್ಧಜಾಟಜೂಟಕ
ಶ್ರಿಯೈ ಚಿರಾಯ ಜಾಯತಾಂ ಚಕೋರಬಂಧುಶೇಖರಃ II೫II

ಲಲಾಟಚತ್ವರಜ್ವಲದ್ಧನಂಜಯಸ್ಫುಲಿಂಗಭಾ
ನಿಪೀತಪಂಚಸಾಯಕಂ ನಮನ್ನಿಲಿಂಪನಾಯಕಮ್
ಸುಧಾಮಯೂಖಲೇಖಯಾ ವಿರಾಜಮಾನಶೇಖರಂ
ಮಹಾಕಪಾಲಿಸಂಪದೆಶಿರೋಜಟಾಲಮಸ್ತು ನಃ II೬II

ಕರಾಲಭಾಲಪಟ್ಟಿಕಾಧಗದ್ಧಗದ್ಧಗಜ್ಜ್ವಲ
ದ್ಧನಂಜಯಾಹುತೀಕೃತಪ್ರಚಂಡಣ್ಡಪಂಚಸಾಯಕೆ
ಧರಾಧರೇಂದ್ರನಂದಿನೀಕುಚಾಗ್ರಚಿತ್ರಪತ್ರಕ
ಪ್ರಕಲ್ಪನೈಕಶಿಲ್ಪಿನಿ ತ್ರಿಲೋಚನೆ ರತಿರ್ಮಮ II೭II

ನವೀನಮೇಘಮಂಡಲೀ ನಿರುದ್ಧದುರ್ಧರಸ್ಫುರತ್
ಕುಹೂನಿಶೀಥಿನೀತಮಃ ಪ್ರಬಂದಬದ್ಧಕಂದರಃ
ನಿಲಿಂಪನಿರ್ಝರೀಧರಸ್ತನೋತು ಕೃತ್ತಿಸಿಂಧುರಃ
ಕಲಾನಿಧಾನಬಂಧುರಃ ಶ್ರಿಯಂ ಜಗದ್ಧುರಂಧರಃII ೮II
shreerayarublogspot
ಪ್ರಫುಲ್ಲನೀಲಪಂಕಜಪ್ರಪಂಚಕಾಲಿಮಪ್ರಭಾ
ವಲಂಬಿಕಂಠಕಂದಲೀರುಚಿಪ್ರಬದ್ಧಕಂದರಮ್
ಸ್ಮರಚ್ಛಿದಂ ಪುರಚ್ಛಿದಂ ಭವಚ್ಛಿದಂ ಮಖಚ್ಛಿದಂ
ಗಜಚ್ಛಿದಾಂಧಕಛಿದಂ ತಮಂತಕಚ್ಛಿದಂ ಭಜೆ II೯II

ಅಗರ್ವ ಸರ್ವಮಂಗಲಾಕಲಾಕದಂಬಮಂಜರೀ
ರಸಪ್ರವಾಹಮಾಧುರೀ ವಿಜೃಂಭಣಾಮಧುವ್ರತಮ್
ಸ್ಮರಾನ್ತಕಂ ಪುರಾನ್ತಕಂ ಭವಾನ್ತಕಂ ಮಖಾನ್ತಕಂ
ಗಜಾನ್ತಕಾನ್ಧಕಾನ್ತಕಂ ತಮನ್ತಕಾನ್ತಕಂ ಭಜೆ II೧೦II

ಜಯತ್ವದಭ್ರವಿಭ್ರಮಭ್ರಮದ್ಭುಜಂಗಮಶ್ವಸ
ದ್ವಿನಿರ್ಗಮತ್ಕ್ರಮಸ್ಫುರತ್ಕರಾಲಭಾಲಹವ್ಯವಾಟ್
ಧಿಮಿದ್ಧಿಮಿದ್ಧಿಮಿಧ್ವನನ್ಮೃದಂಗತುಂಗಮಂಗಲ
ಧ್ವನಿಕ್ರಮಪ್ರವರ್ತಿತ ಪ್ರಚಂಡತಾಂಡವಃ ಶಿವಃ II೧೧II

ಸ್ಪೃಷದ್ವಿಚಿತ್ರತಲ್ಪಯೊರ್ಭುಜಂಗಮೌಕ್ತಿಕಸ್ರಜೊರ್
ಗರಿಷ್ಠರತ್ನಲೋಷ್ಠಯೋಃ ಸುಹೃದ್ವಿಪಕ್ಷಪಕ್ಷಯೋಃ
ತೃಷ್ಣಾರವಿಂದಚಕ್ಷುಷೋ ಪ್ರಜಾಮಹೀಮಹೇಂದ್ರಯೋಃ
ಸಮಪ್ರವೃತ್ತಿಕಃ ಕದಾ ಸದಾಶಿವಂ ಭಜೆ II೧೨II

ಕದಾ ನಿಲಿಂಪನಿರ್ಝರೀನಿಕುಂಜಕೊಟರೆ ವಸನ್
ವಿಮುಕ್ತದುರ್ಮತಿಃ ಸದಾ ಶಿರಃ ಸ್ಥಮಂಜಲಿಂ ವಹನ್
ವಿಮುಕ್ತಲೋಲಲೋಚನೊ ಲಲಾಮಭಾಲಲಗ್ನಕಃ
ಶಿವೇತಿ ಮಂತ್ರಮುಚ್ಚರನ್ ಕದಾ ಸುಖೀ ಭವಾಮ್ಯಹಮ್ II೧೩II

ಇದಮ್ ಹಿ ನಿತ್ಯಮೇವಮುಕ್ತಮುತ್ತಮೋತ್ತಮಂ ಸ್ತವಂ
ಪಠನ್ ಸ್ಮರನ್ ಬ್ರುವನ್ನರೋ ವಿಶುದ್ಧಿಮೇತಿಸಂತತಮ್
ಹರೆ ಗುರೌ ಸುಭಕ್ತಿಮಾಶು ಯಾತಿ ನಾನ್ಯಥಾ ಗತಿಂ
ವಿಮೋಹನಂ ಹಿ ದೇಹಿನಾಂ ಸುಶಂಕರಸ್ಯ ಚಿಂತನಮ್ II೧೪II

ಪೂಜಾವಸಾನಸಮಯೆ ದಶವಕ್ತ್ರಗೀತಂ ಯಃ
ಶಂಭುಪೂಜನಪರಂ ಪಠತಿ ಪ್ರದೋಷೆ
ತಸ್ಯ ಸ್ಥಿರಾಂ ರಥಗಜೇಂದ್ರತುರಂಗಯುಕ್ತಾಂ
ಲಕ್ಷ್ಮೀಂ ಸದೈವ ಸುಮುಖಿಂ ಪ್ರದದಾತಿ ಶಂಭುಃ II
೧೫ II

IIಇತಿ ಶ್ರೀರಾವಣ ಕೃತಮ್ ಶಿವ ತಾಂಡವ ಸ್ತೋತ್ರಮ್ ಸಂಪೂರ್ಣಮ್II

Thursday, April 22, 2010

Sakala grahabala neene

ಸಕಲ ಗ್ರಹಬಲ ನೀನೆ ಸರರಿಜಾಕ್ಷ ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೆ

ರವಿಚಂದ್ರ ಬುಧ ನೀನೆ ರಾಹು ಕೇತುವು ನೀನೆ ಕವಿ ಗುರು ಶನಿಯು ಮಂಗಳನು ನೀನೆ

ದಿವ ರಾತ್ರಿಯಲಿ ನೀನೆ ನವ ವಿಧಾನವು ಭವರೋಗ ಹರ ನೀನೆ ಬೇ ಷಜನು ನೀನೆ

ಪಕ್ಷಮಾಸವು ನೀನೆ ಪರ್ವ ಕಾಲವು ನೀನೆ ನಕ್ಷತ್ರ ಯೋಗ ತಿಥಿ ಕರಣ ನೀನೆ

ಅಕ್ಷಯವಾಗಿ ದ್ರೌಪದಿಯ ಮಾನವಕಾಯ್ದ ಪಕ್ಷಿವಾಹನ ನೀನೆ ರಕ್ಷಕನು ನೀನೆ

ಋತುವತ್ಸರವು ನೀನೆ ಪ್ರತ ಯುಗಾಡಿಯು ನೀನೆ ಕ್ರತು ಹೋಮ ಯಜ್ಞ ಸದ್ಗತಿಯು ನೀನೆ

ಜಿತವಾಗಿ ಎನ್ನೊಡೆಯ ಪುರಂದರವಿಠಲ ಶ್ರುತಿಗೆ ಸಿಲುಕದ ಮಹಾ ಮಹಿಮಾ ನೀನೆ

Monday, April 19, 2010

Ni nyakoo Ninna

ನೀ ನ್ಯಾಕೋ ನಿನ್ನ ಹ೦ಗ್ಯಾಕೋ
ನಿನ್ನ ನಾಮದ ಬಲವೂ೦ದಿದ್ದರೆ ಸಾಕೋ IIಪII


ಕರಿ ಮಕರಿಗೆ ಸಿಕ್ಕಿ ಮೋರೆಯಿ ಡುತ್ತಿರುವಾಗ
ಆದಿಮೂಲ ನೆ೦ಬ ನಾಮವೇಕಾಯ್ತೋ II1II


ಪ್ರಹ್ಲಾದನ ಪಿತ ಬಾಧಿಸುತ್ತಿರುವಾಗ
ನರಹರಿಯೆಂಬ ನಾಮವೇ ಕಾಯ್ತೋ II೨II


ಬಾಲೆಯ ಸಭೆಯಲ್ಲಿ ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣ ಎ೦ಬ ನಾಮವೇ ಕಾಯ್ತೋ II೩II

ಯಮನ ದೂತರುಬಂದು ಅಜಮಿಳನ ನೆ ಳೆವಾಗ
ನಾರಾಯಣನೆ೦ಬ ನಾಮವೇ ಕಾಯ್ತೋ II೪II

ಆ ಮರ ಈ ಮರ ಎ೦ದು ಧ್ಯಾನಿಸುತ್ತಿರುವಾಗ
ರಾಮ ರಾಮವೆಂಬ ನಾಮ ವೆ ಕಾಯ್ತೂ II೫II

ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ
ವಾಸುದೇವನೆಂಬ ನಾಮವೇ ಕಾಯ್ತೂ II೬ II
shreerayarublogspot

ನಿನ್ನ ನಾಮಕೆ ಸರಿಕಾಣೆನೂ ಜಗದೂಳು
ಘನಮಹಿಮಾ ಸಿರಿಪುರಂದರ ವಿಠಲ II೭ II





Jagajagisuva ee sogasina

ಜಗಜಗಿಸುವ ಈ ಸೊಗಸಿನ ಪೀಠಕೆ
ನಗು ನಗುತ ಬಾರೋ ದೇವ

ಗಗನರಾಯನಿಗೆ ಮಗಳೆ೦ದೆನಿಸಿದ
ಜಗಕೆ ಜನನಿ ಕೈಮುಗಿದು ಪ್ರಾಥಿ೯ಸುವಳು

ಅ೦ಗನೆಯರು ಶ್ರವಣ೦ಗ ಳ ತು೦ಬುವ
ಸ೦ಗೀತದ ಸಾರ೦ಗಳಪಿ೯ಸುವರೋ
ನಾಸಸ್ವಾರದ ಸೋಗಸಾದ ಧ್ವನಿಗಳಲಿ
ನಾದ ಬ್ರಹ್ಮನು ತಾ ಕಾಡು ನೋಡುತಲಿಹ

ಪರಿಮಳ ಪುಷ್ಪದ ಸುರಿಮಳೆ ನೋಟವು
ಸ್ಮರಣೆಗೆ ತರುವುದು ಸಿರಿಯವಿವಾಹವ

ಭೂಸುರರೆಲ್ಲರು ಆಶಿವ೯ಚನವ
ಶ್ರೀಶನಿನ್ನಯ ಸ೦ತೋಷಕೆ ನುಡಿವರು

shreerayarublogspot
ಸುಖ ಸಂತೋಷವು ಮುಖ ಮುಖದಲಿಹುದು
ತವ ಸುಖಾಗಮನದಿ೦ ಲಕುಮೀ ಪ್ರಸನ್ನನೆ

Srimad Raamaaramana GOvinda

ಶ್ರೀಮದ್ ರಮಾರಮಣ ಗೋವಿಂದ
ಗೋವಿಂದ ಗೋವಿಂದ


Srimad raMaaramana Govinda
Govinda Govinda

ಜಾನಕಿ ಜೀವನ ಸ್ಮರಣೆ
ಜಯ ಜಯ ರಾಮ( ರಾ೦)
ಹರೇ ಪು೦ದರೀಕವರದ
ಹರೇ ವಿಠಲ ಹರೇ ವಿಠಲ

Shreerayarublogspot
Jaanaki jivana smarane
jaya jaya raam
Hare Pundarikavarada
Hare Vithala Hare Vithala

ಸರ್ವದಾ ಗೋವಿಂದ ನಾಮ
ಕೀತ೯ನ೦ ಸ೦ಕಿತ೯ನ೦
ಹನುಮ ಭೀಮ ಮದ್ವಾ೦ತಗ೯ತ ಹರೇ
ಪ್ರಸನ್ನ ಭವ ಜಯ ಜಯ


sarvada Govinda naama
kiratanam sankirtanam
hanuma bhima madwantaragata Hare
prasanna bhava Jaya Jaya

Laali hayavadana

ಲಾಲಿ ಹಯವದನ
ಲಾಲಿ ಶ್ರೀಹಯವದನ ಲಾಲಿ ರಂಗವಿಠಲ
ಲಾಲಿ ಗೋಪಿನಾಥ ಲಕ್ಷ್ಮಿಸಮೇತ ........ಲಾಲಿ


ಮುತ್ತು ಮಾಣಿಕ್ಯಬಿಗಿದ ತೊಟ್ಟಿಲೋಳು
ಎತ್ತಿದರು ಎನ್ನಯ್ಯ ಕೈಯೊಳಗೆ ನಿಲ್ಲ
ಭಕ್ತರಿಗೆ ವರಗಳನು ಕೊಡುವ ಹೊತ್ತಿಲ್ಲ
ಪುತ್ರನಾ ಎತ್ತಿಕೋ ನಂದಗೋಪಾಲ ........ಲಾಲಿ


ಮನೆಯೊಳಗೆ ಎವನಿತ ಬಹುರಚ್ಚೆ ವಂತ
ಮನೆವಾರ್ತೆ ಯಾರು ಮಾಡುವರೂ ಶ್ರೀಕಾಂತ
ಗುಣಗುಣಗೊಲಿಪ್ಪ ಬಹು ಗುಣವಂತ
ಗುಣಭದ್ಧನಾಗನಿವ ಶ್ರೀಲಕ್ಷ್ಮಿ ಸಮೇತ .........ಲಾಲಿ

shreerayarublogspot
ಶ್ರೀ ರಾಂಬುನಿಧಿಯೂಳಗೆ ಸಜ್ಜೆಯೋಳಗಿರುವ
ಶ್ರೀ ರಮಣ ಭಕ್ತರ ಇಚ್ಹೆ ನಲಿದು ಬರುವ
ಕಾರುಣ್ಯ ಹಯವದನ ಕಾಯ್ದ ತುರುಕರುವ
ನಾರಿನೀರೆಯರೋಳು ಮೆರವ ಕಡು ಚಲುವ ...........ಲಾಲಿ



Audio link:
http://www.kannadaaudio.com/Songs/Children/JoJoLaali/LaaliHayavadana.ram

Saturday, April 17, 2010

Kula Kula Kulavendu

ಕುಲ ಕುಲ ಕುಲವೆಂದು ಹೊಡೆದಾ ಡದಿರಿ ನಿಮ್ಮ
ಕುಲದ ನೆಲೆಯನೆನಾದರೂ ಬಲ್ಲಿರಾ ಬಲ್ಲಿರ IIಪII


ಹುಟ್ಟದ ಯೋನಿಗಳಿಲ್ಲ ಮೆಟ್ಟಿದ ಭುಮಿಗ ಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಕೂಟಕಾಣಿಸ ಬಂದು ಹಿರಿದೆನು ಕಿರಿದೆನು
ನೆಟ್ಟನೆ ಸರ್ವಜ್ಞನ ನೆನೆಕ೦ಡ್ಯಾ ಮನುಜ II೧II
shreerayarublogspot
ಜಲವೇ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೆನಾದರು ಬಲ್ಲಿರಾ
ಜಲದೂ ಕುಳಿಯ೦ತೆ ಸ್ಥಿರವಲ್ಲ ಈ ದೇಹ
ನೆಲೆಯ ಅರಿತು ನೀ ನೆನೆಕ೦ಡ್ಯಾ ಮನುಜ II೨II

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿ ಕೇಶವ
ರಾಯನ ಚರಣ ಕಮಲವ ಕೀರ್ತಿಸುವನೆ ಕುಲಜ II೩II




Pankajamukhiyarellaru

ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮಿವೆಂಕಟರಮಣಗಾರತಿ ಎತ್ತಿರೆ IIಪII
shreerayarublogspt
ಮತ್ಸ್ಯಾವತಾರಗೆ ಮ೦ದರೊದ್ಧಾರಗೆ ಅಚ್ಚರಿಯಿಂದ ಭೂಮಿ ತ೦ದವಗೆ
ಹೆಚ್ಚಾದ ಉಕ್ಕಿನ ಕ೦ಭದಿ೦ದಲಿ ಬಂದ ಲಕ್ಷ್ಮಿ ನರಸಿ೦ಹಗಾರತಿ ಎತ್ತಿರೆ II೧II


ವಾಮನ ರೂಪಲಿ ದಾನ ಬೇಡಿದವಗೆ ಪ್ರೇಮದಿ ಕೂಡ್ಲಿಯ ಪಿಡಿದವಗೆ
ರಾಮಚಂದ್ರನಾಗಿ ದಶಶಿರನನು ಕೊ೦ದ ಸ್ವಾಮಿ ಶ್ರೀಕೃಷ್ಣಗಾರತಿ ಎತ್ತಿರೆ II೨II

ಬತ್ತಲೆ ನಿ೦ತಗೆ ಬೌದ್ಧವತಾರಗೆ ಉತ್ತಮ ಅಶ್ವನೆರಿದಗೆ
ಭಕ್ತರ ಸಲಹುವ ಪುರಂದರವಿಠಲಗೆ ಮುತ್ತೈದೆಯರಾರತಿ ಎತ್ತಿರೆ II3II

Gangadi sakala

ಗ೦ಗಾದಿ ಸಕಲ ತಿಥ೯೦ಗಳ ಫಲವಿದು ಹರಿಯನಾಮ
ಹಿಂಗದೆ ಜನರಿಗೆ ಮ೦ಗಳಕರವಿದು ಹರಿಯನಾಮ

ವೇದಶಾಸ್ತ್ರಗಳ ಓದಲರಿಯದವಗೆ ಹರಿಯನಾಮ
ಆದಿಪುರುಷನ ಪೂಜಿಸದವಗೆ ಹರಿಯನಾಮ
ಸಾಧಿಸಬೇಕು ಮೋಕ್ಷವೆ೦ಬುವರಿಗೆ ಹರಿಯನಾಮ
ಶೋಧಿಸಿ ಇಟ್ಟ ಚಿನ್ನದ ಗಟ್ಟಿ ಕಾಣಿರೋ ಹರಿಯನಾಮ II೧II
shreerayarublogspt
ವ್ಯಾಳವ್ಯಾಳಕೆ ಎಚ್ಚರಿಕೆಯ ಕೊ ಡುವುದು ಹರಿಯನಾಮ
ಜಾಡಿಗೆ ಹೊನ್ನು ತು೦ಬಿಟ್ಟ೦ತೆ ಕಾಣಿರೋ ಹರಿಯನಾಮ
ಕಾಲನ ದೂತರ ತರಿದು ಬಿಸಡುವುದು ಹರಿಯನಾಮ
ಲೋಲ ಶ್ರೀ ಪುರಂದರವಿಠಲರಾಯನ ದಿವ್ಯನಾಮ II೨II

Friday, April 16, 2010

Guruvina gulama

ಗುರುವಿನ ಗುಲಾಮನಾಗುವ ತನಕ ದೂರೆಯದಣ್ಣ ಮುಕುತಿ
ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ IIಪII

ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡದೆ ಧೀರ ನೆನುತ ತಿರಿಗಿದರೇನು
(ನ್ಯಾಯ ಕಥೆಗಳ ಕೆಳ್ದರಿಲ್ಲ ಧಿರನಾಗಿ ತಾ ಪೇಳಿದರಿಲ್ಲ) II1II
shreerayarublogspot

ಕೊರಲೋಳು ಮಾಲೆ ಧರಿಸಿದರಿಲ್ಲ ಬೇರೆಳೂಳು ಜಪಮಣಿ ಎಣಿಸದರಿಲ್ಲ
ಮರುಳನಾಗಿ ತಾ ಶರಿರಕೆ ಬೂದಿ ಒರೆಸಿಕೊಂಡು ತಾನು ತಿರುದಿದಲ್ಲಿ II2II

ನಾರಿಯ ಭೂಗ ಅಳಿಸಿದರಿಲ್ಲ ಶರಿರಕೆ ಸುಖ ಬಿಡಿಸಿದರಿಲ್ಲ
ನಾರದ ವರದ ಪುರಂದರವಿಠಲನ ಸೇರಿಕೊಂಡು ತಾ ಪಡೆಯುವ ತನಕ II3II




Karunisoo ranga

ಕರುಣಿಸೂ ರಂಗ ಕರುಣಿಸೋ
ಹಗಲು ಇರಳು ನಿನ್ನ ಸ್ಮರಣೆ ಮರೆಯದ೦ತೆ

ರುಕುಮಾ೦ಗದನ೦ತೆ ವ್ರತವ ನಾನರಿಯೇನೂ
ಶುಕ ಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೇ
ದೇವಕಿಯಂತೆ ಮುದ್ದಿಸಳರಿಯೇನೂ II೧II

ಗರುದನ೦ದದಿ ಪೋತ್ತು ತಿರುಗಲು ಅರಿಯೆ
ಕರೆಯಲು ಅರಿಯೆ ಕರಿರಾಜನ೦ತೆ
ವರ ಕಪಿಯ೦ತೆ ದಾಸ್ಯವ ಮಾಡಲರಿಯೇ
ಸಿರಿಯಂತೆ ನೆರೆದು ಮೂಹಿಸಲರಿಯೆನೂ II೨II
shreerayarublogspot
ಬಲಿಯಂತೆ ದಾನವ ಕೂಡಲು ಅರಿಯೇನೂ
ಭಕ್ತಿ ಛಲವನರಿಯೇ ಪ್ರಹ್ಲಾದನ೦ತೆ
ಒಲಿಸಲು ಅರಿಯೆ ಅಜು೯ನನ೦ತೆ ಸಖನಾಗಿ
ಸಲಹೂ ದೇವರ ದೇವ ಪುರಂದರವಿಠಲ II೩II




Elu narayana Elu lakshmiramana ( Udayaraaga)

ಏಳು ನಾರಾಯಣ ಏಳು ಲಕ್ಷ್ಮಿರಮಣ
ಏಳು ಶ್ರೀಗಿರಿಗೋಡೆಯ ಶ್ರೀವೆಂಕಟೇಶ
ಏಳಯ್ಯ ಬೆಳಗಾಯಿತು II


ಕಾಸಿದ್ದ ಹಾಲು ಕಾವಡಿಯೂಳು ಹೆಪ್ಪಿ ಟ್ಟು
ಲೇಸಾಗಿ ಕಡೆದು ಹೊಸ ಬೆಣ್ಣೆ ಕೂಡುವೆ
ಶೇಷಶಯನನೆ ಏಳು ಸಮುದ್ರ ಮಂಥನವ ಮಾಡು
ದೇಶ ಕೆ೦ಪಾಯಿತು ಏಳಯ್ಯ ಹರಿಯೇ II೧II

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳು
ಸುರರು ತ೦ದಿದ್ದಾರೆ ಬಲು ಭಕುತಿಯಿಂದ
ಅರವಿ೦ದನಾಭ ಸಿರಿವಿಧಿಭಾವಾದಿಗಲೋಡೆಯಾ
ಹಿರಿದಾಗಿ ಕೋಳಿ ಕೂಗಿತೆಳಯ್ಯ ಹರಿಯೇ II೨II
shreerayarublogspot
ದಾಸರೆಲ್ಲರು ಬಂದು ಧುಳಿದಶ೯ನಕೋ೦ಡು
ಲೇಸಾಗಿ ತಾಳ ದ೦ಡಿಗೆಯ ಪಿಡಿದು
ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು
ಲೇಸಾಗಿ ಸ್ಮರಿಸಿ ಪೂಗಳುವರು ಹರಿಯೇ II೩II



Audio Link:
http://www.kannadaaudio.com/Songs/Devotional/SriVidyabhushana/Old/YeluNarayana.ram

Madhukara vrutii

ಮಧುಕರ ವೃತಿ ಎನ್ನದು ಅದು ಬಲು ಚೆನ್ನದು IIಪII
ಪದುಮನಾಭನ ಪಾದಪದುಮ ಮಧುಪವೆಂಬ IIಅಪII

shreerayarublogspot
ಕಾಲಿಗೆ ಗೆಜ್ಜೆ ಕಟ್ಟಿ ನೀಲವಣ೯ನ ಗುಣ
ಆಲಾಪಿಸುತ್ತ ಬಲು ಓಲಗ ಮಾಡುವಂಥ II೧II
ರಂಗನಾಥನ ಗುಣ ಹಿಂಗದೆ ಪಾಡುತ್ತ
ಶೃ೦ಗಾರ ನೋಡುತ್ತಾಕ೦ಗಾನ೦ದವೆ೦ಬ II೨II
ಇಂದಿರಾಪತಿ ಪುರಂದರವಿಠಲನಲ್ಲಿ
ಚೆಂದದ ಭಕ್ತಿಯಿ೦ದಾನ೦ದವ ಪಡುವಂಥ II೩II

Alli noodalu Raama

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲೆಲ್ಲಿ ನೋಡಿದರು ಅಲ್ಲಿ ಶ್ರೀರಾಮ IIಪII


ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು
ಈ ವೇಳೆ ನರನಾಗಿ ಇರಬಾರದೆ೦ದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ II೧II


ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೂಳಿಪರಿ ರುಪವು೦ಟೆ
ಲವದಲ್ಲಿ ಅಸುರ ದುರುಳರೆಲ್ಲರು
ಅವರವರು ಅಸುರ ದುರುಳರೆಲ್ಲರು II೨II


ಹನುಮದಾದಿ ಸಾಧು ಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲ್ಲಿ ಪುರಂದರವಿಠಲರಾಯನು
ಕೂನೆಗೂಡೆಯನು ತಾನೋಬ್ಬನಾಗಿ ನಿಂತ II೩II

Thursday, April 15, 2010

Apamrityu parihariso

ಅಪಮೃತ್ಯು ಪರಿಹರಿಸೂ ಅನಿಲದೇವ
ಕೃಪಣವತ್ಸಲನೆ ಕಾವರ ಕಾಣೆ ಜಗದೊಳಗೆ

ನಿನಗಿನ್ನು ಸಮರಾದ ಅನಿಮಿತ್ತ ಬಾ೦ಧವರು
ಎನಗಿಲ್ಲ ಆವಾವ ಜನುಮದಲ್ಲಿ
ಅನುದಿನವು ಎಮ್ಮನು ಉದಾಸಿನ ಮಾಡುವುದು
ಅನುಚಿತವು ಜಗದಿ ಸಜ್ಜನ ಶಿಖಾಮಣಿಯೆ II೧II

ಕರಣಾಭಿಮಾನಿಗಳ ಕಿ೦ಕರರು ಮೂಲೋ೯ಕದರಸು
ಹರಿಯು ನಿನ್ನೋಳಗಿಪ್ಪ ಸರ್ವಕಾಲ
ಪರಿಸರನೆ ಈ ಭಾಗ್ಯ ದೂರೆತನಕೆ ಸರಿಯು೦ತೆ
ಗುರುವಯ೯ ನೀ ದಯಾಕರನೆ೦ದು ಪ್ರಾಥಿ೯ಸುವೆ II೨II

ಭವ ರೋಗ ಮೂಚಕನೆ ಪವಮಾನರಾಯ ನಿ
ನ್ನವರವನು ನಾನು ಮಾಧವಪ್ರಿಯನೆ
ಬಾಧೆಯ ಬಿಡಿಸೂ ಅವನಿಯೂಳು ಸುಜನರಿಗೆ
ದಿವಿಜಗನ ಮಧ್ಯದಲಿ ಪ್ರವರ ನಿನಹುದೂ II3II
®shreerayarublogspot©
ಜ್ಞಾನಾಯುರೂಪಕನು ನಿನಹುದೋ ವಾಣಿ
ಪ೦ಚಾನನಾದ್ಯಮರಿಗೆ ಪ್ರಾಣದೇವ
ದಿನವತ್ಸಲನೆ೦ದು ನಾ ನಿನ್ನ ಮೂರೆಹೊಕ್ಕೆ
ದಾನವಾರಣ್ಯ ಕ್ರುಶಾನು ಸವ೯ದಾ ಎನ್ನ II೪II

ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು
ಸಾಧಾರಣವಲ್ಲ ಸಾಧು ಪ್ರಿಯನೇ
ವೇದವಾದೂದಿತ ಜಗನ್ನಾಥ ವಿಠಲನ
ಪಾದಭಾಜನೆಯಿತ್ತು ಮೂಡ ಕೋಡು ಸತತII ೫II

Entha balavanthanoo

ಎ೦ಥ ಬಲವ೦ತನೋ ಕು೦ತಿಯ ಸುಜಾತನೂ
ಭಾರತಿಗೆ ಕಾ೦ತನೋ ನಿತ್ಯ ಶ್ರೀ ಮ೦ತನೋ

ರಾಮಚಂದ್ರನ ಪ್ರಾಣನೂ ಅಸುರ ಹೃದಯ ಬಾಣನೂ
ಖಳರ ಗ೦ಟಲ ಗಾಣನೂ ಜಗದೂಳಗೆ ಪ್ರವಿಣನೂ II೧II

ಕು೦ತಿಯ ಕ೦ದನೋ ಸೌ ಗ೦ಧಿಕವ ತ೦ದನೋ
ಕುರುಕ್ಷೇತ್ರ ಕೆ ಬ೦ದನೋ ಕೌರವರ ಕೋ೦ದನೋ II೨II
©shreerayarublogspot©
ಭ೦ಢಿ ಅನ್ನವನು೦ಡನೋ ಬಕನ ಪ್ರಾಣವ ಕೊ೦ದನೋ
ಭೀಮ ಪ್ರಚ೦ಡನೋ ದ್ರೌಪದಿಗೆ ಗ೦ಡನೋ II೩II

ವೈಷ್ಣವಾಗ್ರಗಣ್ಯನೂ ಸ೦ಚಿತಾಗ್ರ ಪುಣ್ಯನೂ
ದೇವವರೆಣ್ಯನೂ ದೇವಷರಣ್ಯನೂ ೪

ಮದ್ವಶಾಸ್ತ್ರವ ರಚಿಸಿದನೂ ಸದ್ವೈಷ್ಣವರ ಸಲಹಿದನೂ
ಉಡುಪಿ ಕೃಷ್ಣನ ನಿಲಿಸಿದನೂ ಪುರಂದರವಿಠಲನ ಒಲಿಸಿದನೆ ೫

kandu kandu nii enna

ಕಂಡು ಕಂಡು ನೀ ಎನ್ನ ಕೈ ಬಿಡುವದೇ ಕೃಷ್ಣ
ಪು೦ಡರೀಕಾಕ್ಷ ಶ್ರೀಪುರುಷೋತ್ತಮ

ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊ೦ದೆನಯ್ಯ ನಿರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎ೦ದೆ೦ದಿಗು ನಿನ್ನ ನ೦ಬಿದೆನೋ ಕೃಷ್ಣ II1II

ಭಕ್ತವತ್ಸಲನೆಂಬ ಬಿರುದು ಪೊತ್ತ ಮೇಲೆ
ಭಕ್ತರಧಿನನಾಗಿರಬೇಡವೆ
ಮುಕ್ತಿದಾಯಕ ನೀನು ಹೊನ್ನೂರುಪುರವಾಸ
ಶಕ್ತಗುರು ಪುರಂದರವಿಠಲ ಶ್ರೀಕೃಷ್ಣ II2II



Tuesday, April 13, 2010

BIdeno ninghri Srinivaasa

ಬಿಡೆನೋ ನಿನ್ನ೦ಘ್ರಿ ಶ್ರೀನಿವಾಸ
ಎನ್ನ ದುಡಿಸಿಕೊ ಳ್ಳಲೋ ಶ್ರೀನಿವಾಸ
ನಿನ್ನ ನುಡಿಯ ಜೋತೆಲ್ಲೋ ಶ್ರೀನಿವಾಸ
ನನ್ನ ನಡೆ ತಪ್ಪು ಕಾಯೋ ಶ್ರೀನಿವಾಸ II1II


ಬಡಿಯೋ ಬೆನ್ನಲ್ಲಿ ಶ್ರೀನಿವಾಸ
ಎನ್ನ ಒಡಲ ಹೊಯ್ಯದಿರೂ ಶ್ರೀನಿವಾಸ
ನಾ ಬಡವ ಕಾಣೆಲೂ ಶ್ರೀನಿವಾಸ
ನಿನ್ನ ಒಡಲ ಹೂಕ್ಕೆನೂ ಶ್ರೀನಿವಾಸII2 II

ಪಂಜು ಪಿಡಿವೇನೂ ಶ್ರೀನಿವಾಸ
ನಿನ್ನ ಎ೦ಜಲ ಬಳಿದುಂಬೆ ಶ್ರೀನಿವಾಸ
ನಾ ಸಂಜೆ ಉದಯಕೆ ಶ್ರೀನಿವಾಸ
ಕಾಳಜಿಯ ಪಿಡಿವೆ ಶ್ರೀನಿವಾಸ II3II

ಸತ್ತಿಗೆ ಚಾಮರ ಶ್ರೀನಿವಾಸ
ನಾ ನೆತ್ತಿ ಕುಣಿವೇನೂ ಶ್ರೀನಿವಾಸ
ನಿನ್ನ ರತ್ನದಾವಿಗೆ ಶ್ರೀನಿವಾಸ
ನಾ ಹೊತ್ತು ನಲಿವೇನೂ ಶ್ರೀನಿವಾಸ II4II

ಅವರೊಳಿಗವ ಮಾಳ್ಪೆ ಶ್ರೀನಿವಾಸ
ನನ್ನ ಪಾಲಿಸೋ ಬಿಡದೆ ಶ್ರೀನಿವಾಸ
ಹೇಳಿದ೦ತಾಗಲಿ ಶ್ರೀನಿವಾಸ
ನಿನ್ನಗಳಾಗಿವೆ ಶ್ರೀನಿವಾಸ II5II

ನಿನ್ನ ನಾಮ ಹೋಳಿಗೆ ಶ್ರೀನಿವಾಸ
ಕಳ್ಳ ಕುನ್ನಿ ನಾನಾಗಿಹೆ ಶ್ರೀನಿವಾಸ
ಕಟ್ಟಿ ನಿನ್ನವರೋದ್ದರೆ ಶ್ರೀನಿವಾಸ
ನನಗಿನ್ನೂ ಲಜ್ಜೆತಕೆ ಶ್ರೀನಿವಾಸ II6II

ಬೀಸಿ ಕೊಲ್ಲಲವರೆ ಶ್ರೀನಿವಾಸ
ಮುದ್ರೆ ಕಾಸಿ ಚುಚ್ಚುಲವರೆ ಶ್ರೀನಿವಾಸ
ಮಿಕ್ಕ ಘಾಸಿಗ೦ಜೆನಯ್ಯ ಶ್ರೀನಿವಾಸ
ಎ೦ಜಲ ಬ೦ಟ ನಾ ಶ್ರೀನಿವಾಸ II7II

ಹೇಸಿ ನಾನಾದರೆ ಶ್ರೀನಿವಾಸ
ಹರಿದಾಸರೂಳು ಪೊಕ್ಕೆ ಶ್ರೀನಿವಾಸ
ಅವರ ಭಾಷೆಯ ಕೇಳಿಹೆ ಶ್ರೀನಿವಾಸ
ಆ ವಾಸಿಯ ಸೈರಿಸೂ ಶ್ರೀನಿವಾಸ II8II

ತಿ೦ಗ ಳವನಲ್ಲ ಶ್ರೀನಿವಾಸ
ವತ್ಸರ೦ಗಳವನಲ್ಲ ಶ್ರೀನಿವಾಸ
ರಾಜ೦ಗಳ ಸವದಿಪೆ ಶ್ರೀನಿವಾಸ
ಭವ೦ಗಳ ದಾಟುವೆ ಶ್ರೀನಿವಾಸ II9II

ನಿನ್ನವ ನಿನ್ನವ ಶ್ರೀನಿವಾಸ
ನಾನನ್ಯರರಿವೇನೂ ಶ್ರೀನಿವಾಸ
ಅಯ್ಯ ಮನ್ನಿಸೂ ತಾಯಿತಂದೆ ಶ್ರೀನಿವಾಸ
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ II10II

Saturday, April 10, 2010

Raaya Baaro

ರಾಯ ಬಾರೋ ತಂದೆ ತಾಯಿ ಬಾರೋ
ನಮ್ಮನ್ ಕಾಯ ಬಾರೋ I
ಮಾಯಿಗಳ ಮದಿ೯ಸಿದ ರಾಘವೇಂದ್ರ ರಾಯ ಬಾರೋII

ವಂದಿಪ ಜನರಿಗೆ ಮಂದಾರ ತರುವಂತೆ
ಕು೦ದದಭಿಷ್ಟ ಸಲಿಸುತಿಪೆ೯ ರಾಯ ಬಾರೋ
ಕು೦ದದಭಿಷ್ಟ ಸಲಿಸುತಿಪೆ೯ ಸರ್ವಜ್ನ
ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ II1II

ಆರು ಮೂರೂ ಏಳು ನಾಲ್ಕು ಎ೦ಟು ಗ್ರಂಥ ಸಾರಾಥ೯
ತೋರಿದಿ ಸವ೯ರಿಗೆ ನ್ಯಾಯದಿಂದ ರಾಯ ಬಾರೋ
ತೋರಿದಿ ಸರ್ವರಿಗಿ ನ್ಯಾಯದಿಂದ ಸರ್ವಜ್ನ
ಸೂರಿಗಳರಸನೆ ರಾಘವೇಂದ್ರ ರಾಯ ಬಾರೋ II2II

ರಾಮಪದ ಸರಸಿ ರುಹ ಭ್ರುಂಗ ಕೃಪಾಪಾಂಗ
ಭ್ರಾಮಕ ಜನರ ಮಾನಭಂಗ ರಾಯ ಬಾರೋ
ಭ್ರಾಮಕ ಜನರ ಮಾನಭಂಗ ಮಾಡಿದ
ಧೀಮ೦ತರೂಡೆಯ ರಾಘವೇಂದ್ರ ರಾಯ ಬಾರೋ II3II



ಭಾಸುರ ಚರಿತನೆ ಭೂಸುರ ವಂದ್ಯನೆ
ಶ್ರೀ ಸುಧೀ೦ದ್ರಾಯ೯ರ ವರಪುತ್ರಾ ರಾಯ ಬಾರೋ
ಶ್ರೀ ಸುಧೀ೦ದ್ರಾಯ೯ರ ವರಪುತ್ರಾ ನೆನೆಸಿದೆ
ದೈಶಿಕರೊಡೆಯ ರಾಘವೇಂದ್ರ ರಾಯ ಬಾರೋ II4II

ಭೂತಳ ನಾಥನ ಭೀತಿಯ ಬಿಡಿಸಿದ
ಪ್ರೇತತ್ವ ಕಳೆದ ಮಹಿಷಿಯಾ ರಾಯ ಬಾರೋ
ಪ್ರೆತತ್ವ ಕಳೆದ ಮಹಿಷಿಯಾ ಮಹಾ ಮಹಿಮ
ಜನನ್ನಾಥ ವಿಠಲನ ಪ್ರೀತಿಪಾತ್ರ ರಾಯ ಬಾರೋ II5II



Audio Link:
http://www.kannadaaudio.com/Songs/Devotional/Raaya-Baaro-Raghavendra-Baaro/Raaya-Baaro.ram

Tuesday, April 6, 2010

Baaro Namma manege sriRaghavendra

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ IIಪII

ಬಾರೋ ದುಃಖಾಪಹಾರ ಬಾರೋ ದುರಿತದೂರ
ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು IIಅ II

ಬಾಲಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ
ಲೋಲ ಶ್ರೀನರಹರಿ ಕಾಲರೂಪವ ತೋರ್ದೆ II೧II

ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ
ಬೇಸರದೆ ಓದಿ ಮೆರೆವ ವ್ಯಾಸಮುನಿಯೆ II೨ II

ಮಂತ್ರಗೃಹದಲಿ ನಿಂತ ಸುಯತಿವರ್ಯ
ಅಂತ ತಿಳಿಯದೊ ನೀ ಅಂತರದೊಳು II೩ II

ಭೂತಪ್ರೇತಗಳನು ಘಾತಿಸಿ ಬಿಡುವಂಥ
ಖ್ಯಾತಿಯುತ ಯತಿನಾಥನೆ ತುತಿಸುವೆ II೪II

ಕುಷ್ಟರೋಗಾದಿಗಳು ನಷ್ಟ ಮಾಡುವಂಥ
ಅಷ್ಟಮಹಿಮೆಯುತ ಶ್ರೇಷ್ಠಮುನಿಯೆ II೫ II

ಕರೆದರೆ ಬರುವಿಯೆಂಬೋ ಕೀರುತಿ ಕೇಳಿ ನಾ
ಕರೆದೆನೊ ಕರುಣದಿ ಕರ ಪಿಡಿಯೋ II೬ II

ಭಕ್ತವತ್ಸಲನೆಂಬ ಬಿರುದಿನಿಂದಾದರಾ
ಸಕ್ತನ ಮೊರೆ ಕೇಳಿ ಮಧ್ವೇಶವಿಠ್ಠಲದಾಸII ೭II

Baaro Namma Manege SriRaghavendra IIpaII
Baaro dukhapahaara baaro duritadoora
baarayya sanmarga daari tooruva guru IIapa II


Baalaprahaladanaagi khula kashyapuvige
loola SrinaraHari Kaalarupava torde 1

Vyaasanirmita grantha madwakruta bhashyava
besarade oodi mereve VYaasamuniye 2

Mantragruhadali ninta suyativarya
anta tiliyadoo nii antaradooLU 3

Bhutapretagalanu ghatisi Biduvantha
khyatiyuta yatinaathane tutisuve 4

kushtaroogadigalu nashta Maaduvantha
ashtamahimeyuta sheshthamuniye 5

karedare Baruviyemboo kiruti keeli naa
karedenoo karuNadi kara pidiyoo 6

bhktavatsalanemba birudinindaadaraa
saktana moore keeli madhweshviThaladaasa 7


Audio link:
http://www.kannadaaudio.com/Songs/Devotional/home/ShriRaghavendraSwamySuprabhata.php

Sunday, April 4, 2010

Prana baaroo

ಪ್ರಾಣ ಬಾರೋ ಜಗತ್ರಾಣ ಬಾರೋ
ಪ್ರಾಣಿ ಸಕಲ ಕಮ೯ ಮಾಳ್ಪ ಜಾಣ ಬಾರೋ

ಪಂಚ ರೂಪದಿ ಪ್ರಾಪ೦ಚ ವ್ಯಾಪ್ತ ಬಾರೋ
ಹ೦ಚಿಕೇಲಿ ದೈತ್ಯೆಯರ ವ೦ಚಕನೆ ಬಾರೋ II1II

ಪಾಯೂಪಸ್ತಕಮ೯ ಗೈವಾಪಾನ ಬಾರೋ
ವಾಯುವ ನೀ ನಿರೂಧಿಸೆ ಕಾಯ್ವರಾರೋII 2II

ಗೋಣುಮುರಿವ ಭಾರಹೂರುವ ವ್ಯಾನ ಬಾರೋ
ಪ್ರಾಣಪ೦ಚ ವ್ಯೂಹ ಮುಖ್ಯ ವ್ಯಾನ ಬಾರೋ II3 II

ಉದಕ ಅನ್ನಕ್ಕವಕಾ ಶುದಾನ ಬಾರೋ
ಮುದದಿ ಶ್ವಾಸ ಮಂತ್ರ ಜಪ ಜಾಣ ಬಾರೋ II4 II

http://shreerayaru.blogspot.com/

ವೈದಿಕ ಲೌಕಿಕ ಶಬ್ದ ನುಡಿಸೆ ಬಾರೋ
ಊಧ್ವ೯ಗತಿ ದಾತನೆ ಉದಾನ ಬಾರೋ II5II


ಪಾನ ಅನ್ನಗಳ್ಹ೦ಚೆ ಸಮಾನ ಬಾರೋ
ಧ್ಯಾನವಿ೦ತು ಈವ ಮುಖ್ಯ ಪ್ರಾಣ ಬಾರೋII 6II

ಕರುಣಾಸಾಗರ ದೇಹ ವೀಣೆ ಚರಿಸೆ ಬಾರೋ
ಗುರು ಗೋವಿಂದ ವಿಠಲಾಧಿಷ್ತಿತ ಗುರುವೇ ಬಾರೋII 7II

Thursday, April 1, 2010

Hege Baredittu Prachinadali

ಹೇಗೆ ಬರೆದಿತ್ತು ಪ್ರಾಚಿನದಲ್ಲಿ
ಹಾಗೆ ಇರಬೇಕು ಸ೦ಸಾರದಲ್ಲಿ
ಪಕ್ಷಿ ಕೂತಿತು ಅ೦ಗ ಳದಲ್ಲಿ
ಹಾರಿಹೋಯಿತು ಆ ಕ್ಷಣದಲ್ಲಿ
ಆಡುವ ಮಕ್ಕಳು ಮನೆ ಕಟ್ಟಿದರು
ಆಟ ಸಾಕೆ೦ದು ಮುರಿದೂಡಿದರು
ಸ೦ತೆ ನೆರೆದಿತು ನಾನಾ ಪರಿ
ತಿರುಗಿ ಆಯಿತು ತಮ್ಮ ತಮ್ಮ ದಾರಿ
ವಸ್ತಿಕಾರನು ವಸ್ತಿಗೆ ಬಂದ
ಹೊತ್ತಾರೆ ಎದ್ದು ಊರಿಗೆ ಹೋದ
ಈ ಸ೦ಸಾರಮಾಯ ಬಿಡಿಸಿ
ಕಾಯೋ ಪುರಂದರವಿಠಲ II


Hege Baredittu Prachinadalli
Haage irabeku samsaaradalli
Pakshi kootitu angaladalli
haarihooyitu aakshanadalli
aaduva makkalu mane kattidaru
aata saakendu muridoodidaru
sante nereditu naanaa pari
tirugi aayitu tamma tamma daari
vastikaaranu vastige banda
hottare eddu urige hooda
ee samsaaramaaya bidisi
kaayoo PurandaraVithala