Thursday, March 4, 2010

Baliya manege vaamana Bandante

ಬಲಿಯ ಮನೆಗೆ ವಾಮನ ಬ೦ದ೦ತೆ
ಭಾಗಿರಥಗೆ ಶ್ರೀಗಂಗೆ ಬ೦ದ೦ತೆ
ಮುಚುಕು೦ದಗೆ ಶ್ರೀ ಮುಕುಂದ ಬ೦ದ೦ತೆ
ಗೋಪಿಯರಿಗೆ ಗೋವಿಂದ ಬ೦ದ೦ತೆ
ವಿಭಿಶನ ಮನೆಗೆ ಶ್ರೀರಾಮ ಬ೦ದ೦ತೆ ನಿನ್ನ
ನಾಮವು ಬಂದು ಎನ್ನ ನಾಲಿಗೆಯಲಿ ನಿಂದು
ಸಲಹಲಿ ಶ್ರೀಪುರಂದರವಿಠಲ

Sriniketana

ಶ್ರೀನಿಕೇತನ ಪಾಲ ಮಾ೦ ಶ್ರೀನಿಕೇತನ II II
ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ
ಗಾನು ನಮಿಸುವೆ ಪೋರೆದಿನದಯಾ ಳೋ IIಅಪII

ಜ್ಞಾನಮಾನದಾ ಶರಣರ ಸುರ
ಧೇನು ಸವ೯ದಾ
ನೀನೆ೦ದರಿತು ಸದಾನುರಾಗದಲಿ
ಧ್ಯಾನಿಪೆ ಮನದನುಮಾನವ ಕಳೆಯೋ II೧II

ಶ್ರೀಕರಾಚಿ೯ತ ಪಾದಾಬ್ಜ ಪ
ರಾಕು ಅಚ್ಯುತ
ಶೋಕನಾಶನ ವಿಶೂಕಜನಕ ಹೃ
ದ್ವ್ಯಾಕುಲ ಕಳೆಯೂ ಕೃಪಾಕರ ಒಲಿದು II೨II

ಪನ್ನಗಾಚಲನಿವಾಸ ಪ್ರ
ಪನ್ನ ವತ್ಸಲ
ಬಿನ್ನಪ ಕೇಳೂ ಜಗನ್ನಥವಿಠಲ
ಧನ್ಯನ ಮಾಡೂ ಶರಣ್ಯ ಶರಣನಾ II೩II

Toogire rangana Toogire krishnana

ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನ೦ತನ IIಪII
ತೂಗಿರೆ ವರಗಿರಿಯಪ್ಪ ತಿಮ್ಮಪ್ಪನ ತೂಗಿರೆ ಕಾವೇರಿರಂಗಯ್ಯನ IIಅಪII

ನಾಗಲೋಕದಲ್ಲಿ ನಾರಾಯಣ ಮಲಗ್ಯಾನೆ ನಾಗಕನಿಕ್ಯೆಯರು ತೂಗಿರೆ
ನಾಗವೇಣಿಯರು ನೇಣು ಪಿಡಿದು ಕೊಂಡು ಬೇಗನೆ ತೊಟ್ಟಿಲು ತೂಗಿರೆ II೧II

ಇಂದ್ರಲೋಕದಲ್ಲುಪೇ೦ದ್ರ ಮಲಗ್ಯಾನೆ ಇಂದುಮತಿಯರೆಲ್ಲ ತೂಗಿರೆ
ಇಂದ್ರಕನಿಕೆಯರು ಚಂದದಿ ಬಂದು ಮುಕುಂದನ ತೊಟ್ಟಿಲು ತೂಗಿರೆ II೨II

ಆಲದೆಲೆಯಮೇಲೆ ಶ್ರೀಲೋಲ ಮಲಗ್ಯಾನೆ ನೀಲಕು೦ತಳೆಯರು ತೂಗಿರೆ
ವ್ಯಾಳಶಯನ ಹರಿ ಮಲಗು ಮಲಗು ಎಂದು ಬಾಲಕೃಷ್ಣಯ್ಯನ ತೂಗಿರೆ II೩II

ಸಾಸಿರನಾಮನೆ ಸವೋ೯ತ್ತಮನೆ೦ದು ಸೂಸುತ್ತ ತೊಟ್ಟಿಲ ತೂಗಿರೆ
ಲೇಸಾಗಿ ಮದುವಿನೂಳ್ ಶೇಷನ ತುಳುದುಟ್ಟ ದೋಷವಿದೂರನ ತೂಗಿರೆ II೪II

ಅರಳೆಲೆ ಮಾಗಾಯಿ ಕೂರಳಮುತ್ತಿನಹಾರ ತರಳನ ತೊಟ್ಟಿಲು ತೂಗಿರೆ
ಸಿರಿದೇವಿರಮಣನೆ ಪುರಂದರವಿಠಲನ ಕರುಣದಿ ಮಲಗೆಂದು ತೂಗಿರೆ II೫II