Tuesday, November 24, 2009

BRamhandadolu

ಬ್ರಹ್ಮಾಂಡದೊಳಗೆ ಅರಸಿ ನೋಡಲು ನಮ್ಮೂರೇ ವಾಸಿ
ರಮ್ಮೆಯರಸನು ಸರ್ವದ ವಾಸಿಪ ಸುಮ್ಮಾನದಿ ತಾನು


ಜನನ ಮರಣವಿಲ್ಲ ಅಲ್ಲಿ ಉಣುವ ದುಃಖವಿಲ್ಲ
ಅನುಜ ತನುಜರು ಅಲ್ಲಿಲ್ಲ ಅನುಮಾನದ ಸೊಲ್ಲೇ ಇಲ್ಲ

ನಿದ್ರೆಯು ಅಲ್ಲಿಲ್ಲ ರೋಗೋ ಪದ್ರಗಳಲ್ಲಿಲ್ಲ
ಕ್ಷುದ್ರಜನಂಗಳು ಅಲ್ಲಿಲ್ಲ ಸಮುದ್ರಶಯನ ಬಲ್ಲ ಎಲ್ಲ

ಸಾಧುಜನರ ಕೂಡೆ ಮೋಕ್ಷಕೆ ಸಾಧನೆಗಳ ಮಾಡೆ
ಮಾಧವ ಪುರಂದರವಿಠಲರಾಯನು ಆದರಿಸುವನಲ್ಲೆ ಬಲ್ಲೆ