Monday, August 17, 2009

Hanumana Matave Hariya matavu /ಹನುಮನ ಮತವೆ ಹರಿಯ ಮತವು

ಹನುಮನ ಮತವೇ ಹರಿಯ ಮತವೂ
ಹರಿಯ ಮತವೇ ಹನುಮನ ಮತವೂ IIಪII

ಹನುಮನು ಒಲಿದರೆ ಹರಿ ತಾ ಒಲಿವನು
ಹನುಮನು ಮುನಿದರೆ ಹರಿ ಮುನಿವಾ IIಅಪII

ಹನುಮನು ಒಲಿದರೆ ಸುಗ್ರೀವನು
ಗೆದ್ದಾ ಹನುಮನು ಮುನಿದರೆ ವಾಲಿಯು ಬಿದ್ದಾ II೧II

ಹನುಮನು ಒಲಿದರೆ ವಿಭೀಷಣ ತಾ ಗೆದ್ದಾ
ಹನುಮನು ಮುನಿದರೆ ರಾವಣ ಬಿದ್ದಾ II೨II

ಹನುಮನು ಪುರಂದರ ವಿಠಲ ದಾಸ
ಪುರಂದರ ವಿಠಲನು ಹನುಮನೋಳ್ವಾಸಾ
II೩II

Sharanu sharanayya sharanu Benaka /ಶರಣು ಶರಣಯ್ಯ ಶರಣು ಬೆನಕ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ
ಸುಖ ತಂದೆ ಕಾಯೋ ನಮ್ಮ ಕರಿಮುಖ IIಪII

ಎಲ್ಲಾರು ಒ೦ದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ
ಗರಿಕೆ ತಂದರೆ
ನೀನು ಕೊಡುವೆ ವರವನ್ನು ಗತಿ
ನೀನೆ ಗಣಪನೆ ಕೈ ಹಿಡಿಯೋ ಮುನ್ನ II೧ II


ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ನೀಡಯ್ಯ ಬಾಳೆಲ್ಲ ಬೆಳಗುವ ಶಕುತಿ
ತೋರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ II೨II

ಬೆನಕ ಬೆನಕ ಎಕದಂತ
ಪಚ್ಚೆಗಲ್ಲು ಪಾಣಿಮೆಟ್ಟ್ಲು ಒಪ್ಪುವ ವಿಘನೇಶ್ವರ
ನಿನಗೆ ಇಪ್ಪತೊಂದು ನಮಸ್ಕಾರಗಳು II೩II

Audio
Link:
http://www.kannadaaudio.com/Songs/Devotional/GaneshaChaturthiDevotional/Sharanu.ram

Saturday, August 15, 2009

Sri krishnashtakam /ಶ್ರೀ ಕೃಷ್ಣ ಅಷ್ಟಕಂ



ವಸುದೇವ ಸುತಂ ದೇವಂ ಕಂಸ ಚಾನುರ ಮರ್ದನಂ
ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗಧ್ಗುರುಂ
ಅಥಸೀ ಪುಷ್ಪ ಸಂಕಾಶಂ ಹಾರ ನೂಪುರ ಶೋಭಿತಂ
ರತ್ನ ಕಂಕಣ ಕೇಯುರಂ ಕೃಷ್ಣಂ ವಂದೇ ಜಗಧ್ಗುರುಂ
ಕುಟಿಲಾಲಕ ಸಂಯುಕ್ತಂ ಪೂರ್ಣ ಚಂದ್ರ ನಿಭಾನನಂ
ವಿಲಸತ್ ಕುಂಡಲ ಧರಂ ಕೃಷ್ಣಂ ವಂದೇ ಜಗಧ್ಗುರುಂ
ಮಂಧಾರ ಗಂಧ ಸಂಯುಕ್ತಂ ಚಾರುಹಾಸಂ ಚತುರ್ಭುಜಂ
ಬಾರ್ಹಿ ಪಿಂಚವ ಚುಡಗಂ ಕೃಷ್ಣಂ ವಂದೇ ಜಗಧ್ಗುರುಂ
ಉತ್ಪುಲ್ಲ ಪದಂ ಪತ್ರಕ್ಷಂ ನೀಲ ಜೀಮೂತ ಸಂನಿಭಂ
ಯಾದವಾನಂ ಶಿರೋ ರತ್ನಂ ಕೃಷ್ಣಂ ವಂದೇ ಜಗಧ್ಗುರುಂ
ರುಕ್ಮಿಣಿ ಕೇಳಿ ಸಂಯುಕ್ತಂ ಪಿಥಮ್ಬರ ಸುಶೋಭಿತಂ
ಆವಾಪ್ತ ತುಳಸಿ ಗಂಧಂ ಕೃಷ್ಣಂ ವಂದೇ ಜಗಧ್ಗುರುಂ
ಗೋಪಿಕಾನಾಂ ಕುಸಥ್ವಂಥ್ವ ಕುಮ್ಕುಮಾನ್ಗಿಥ ವಕ್ಷಸಂ
ಶ್ರೀನಿಕೇತಂ ಮಹೇಶ್ವಾಸಂ ಕೃಷ್ಣಂ ವಂದೇ ಜಗಧ್ಗುರುಂ
ಶ್ರೀವತ್ಸಾಂಕಂ ಮಹೋರಸ್ಕಂ ವನ ಮಾಲ ವಿರಯಿತಂ
ಶಂಖ ಚಕ್ರ ಧರಂ ದೇವಂ ಕೃಷ್ಣಂ ವಂದೇ ಜಗಧ್ಗುರುಂ
ಕ್ರಿಷ್ಣಷ್ಟಕಂ ಇಥಂ ಪುಣ್ಯಂ ಪ್ರಾಥ ರುಥ್ಥಾಯ ಯ್ಹಪತೆಥ್
ಕೋಟೀ ಜನ್ಮ ಕೃತಂ ಪಾಪಂ ಸ್ಮರನಾಥ್ ತಸ್ಯ ನಚ್ಯಥಿ

SRI KRISHNASHTAKAM
vasudevasutam dEvam kamsaChaNooraMardhanam (1)
DEvakeeParamAnandam Krishnam Vande Jagadgurum
ataseePushpaSankAsham hAranoopuraShobhitam (2)
ratnakankaNakeyooram Krishnam Vande Jagadgurum
kutilAlakaSamyuktam PoorNaChandranibhAsanam (3)
vilasatkundaladharam Krishnam Vande Jagadgurum
mandAragandhasamyuktam chAruhAsam chaturbhujam (4)
barhiPinchAvachoodangam Krishnam Vande Jagadgurum
utphalaPadmaPatrAksham neelajeemootasannibham (5)
yAdavAnam shiroratnam Krishnam Vande Jagadgurum
rukmiNi Kelisamyuktam PeetAmbara Sushobhitam (6)
avApta Tulasigandham krishnam Vande Jagadgurum
gopikAnAm KuchadwandwakukumAnkitavakshasam (7)
shriniketam MahEshwasam Krishnam Vande Jagadgurum
shrivatsAnkam Mahoraskam VanamAlAvirAjitam (8)
shankachakradharam Devam Krishnam Vande Jagadgurum
krishnAshTakamidam puNyam prAtarutthAya yah paThet (9)
koTiJanmaKrutam PApam SmaraNena Vinashyati.

Audio Link:
http://www.youtube.com/watch?v=i1Qm3s5e_a4&feature=related
( This video has telugu lyrics of Krishnashtakam
).

Monday, August 10, 2009

Yaak nirdayanaade

ಯಾಕೆ ನಿರ್ದಯನಾದೆ ಎಲೊ ದೇವನೆ ಪ
ಶ್ರೀ ಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ ಅ ಪ

ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು

ಹಿಂಗದೆ ಪ್ರಹ್ಲಾದನಪ್ಪಿಕೊಂಡೆ
ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ
ಬಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ ೧

ಸಿರಿದೀವಿಗಹೀಲದೆ ಸೆರಗು ಸಂವರಿಸಿದೆ
ಗರುಡನ ಮೇಲೆ ಗಮನವಾಗದೆ
ಭರದಿಂದ ನೀ ಬಂದು ಕರಿಯನುದ್ಧರಿದೆ
ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ೨

ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ
ಭಜನೆಗವರೇ ಹಿತರೆ ನಾ ನಿನಗೆ ಅನ್ಯನೇ
ತ್ರಿಜಗಪತಿ ಸಲಹೆನ್ನ ಪುರಂದರವಿಠಲ ೩

Yeke malagihe hariye

ಏಕೆ ಮಲಗಿಹೆ ಹರಿಯೆ ಏಸು ಆಯಾಸ
ಜೋಕೆ ಮಾಡುವ ಬಿರುದು ಸಾಕಾಯಿತೇನೊ IIಪII

ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ
ಅಮೃತಮಥನದಿ ಗಿರಿಯು ಅತಿ ಭಾರವಾಯ್ತೊ
ರಮಣಿಯನು ತರುವಾಗ ರಣರಂಗ ಬಹಳಯ್ತೊ
ಅಮರರಿಪುವನು ಸೀಳೆ ಆಯಾಸವಾಯ್ತೊ II೧II

ಅಕಾಶ ಭೇದಿಸಲು ಆ ಕಾಲು ಉಳುಕಿತೊ
ಕಾಕುನೃಪರನು ಸೀಳಿ ಕರ ಸೋತಿತೊ
ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ
ಲೋಕಭಾರವ ಇಳುಹಿ ಸಾಕುಸಾಕಾಯ್ತೊ II೨ II

ಚಪಲೆಯರ ಮೋಹಿಸಲು ಉಪಟವು ಬಹಳಯ್ತೊ
ಅಪವಿತ್ರವನಡಗಿಸಲು ಅಧಿಕ ಶ್ರಮವಾಯ್ತೊ
ಕೃಪೆಮಾಡಿ ನೋಡೈಯ್ಯ ಕಣ್ಣುತೆರೆದು ಎನ್ನಕಡೆ
ಕಪಟನಾಟಕ ಶ್ರೀ ಗೋಪಾಲವಿಠಲ II೩II

Vadiraajamunipa

ವಾದಿರಾಜಮುನಿಪ ಹಯಮುಖ
ಪಾದಕಮಲ ಮಧುಪ IIಪII

ನೀ ದಯದಲಿ ತವಪಾದಧ್ಯಾನವನು
ಆದರದಲಿ ಕೊಟ್ಟಾದರಿಸೆನ್ನನು IIಅಪII

ಮೂಷಕಬಿಲದಿಂದ ಉದರ ಪೋಷಕ ಬರಲಂದು
ವಾಸುಕಿ ಭಯದಿ ನಿಮ್ಮಾಸನದೆಡೆ ಬರೆ
ಕ್ಲೇಶ ಕಳೆದು ಸಂತೋಷಗೈಸಿದೆ II೧II

ಮುಂದೆ ಭೂತನರನ ಪ್ರೇರಿಸಿ ಹಿಂದೆ ಒಬ್ಬ ನರನ
ನಿಂದರಿಸಿ ಆನಂದದಿಂದ ಜನ-
ವೃಂದ ನೋಡುತ್ತಿರೆ ಅಂದಣ ನಡೆಸಿದ್ಯೊ II೨II

ಶಾಸ್ತ್ರ ಪ್ರಸಂಗದಲಿ ನಾರಾಯಣಭೂತರ ಗೆಲಿದಲ್ಲೆ
ಖ್ಯಾತಿಯಿಂದ ಬಹು ಮಾತನಾಡಿ

ಶ್ರೀನಾಥನ ಮಂದಿರ ಪ್ರೀತಿಲಿ ತರಿಸಿದ್ಯೊ II೩II

ತುರಗವದನ ಪಾದ ಭುಜಗಳಲಿ
ಧರಿಸಿಕೋಂಡು ಮೋದ ಕಡಲೆಮಡ್ಡಿಯನು
ಕರದಿಂದುಣಿಸಿದ ಗುರುವರಶೇಖರ II೪II

ಆ ಮಹಾ ಗೋಪಾಲವಿಠಲ ತಾಮರಸದಳಗಳ
ಧೀಮಂತರಿಗೆ ಸುಕಾಮಿತವನು ಕೊಡುವ
ಆ ಮಹಾಮಹಿಮ II೫II
ರಾಮ ನಾಮವ ನೆನೆ ಮನವೆ ಪ
ರಾಮ ಎಂದವನೆ ಧನ್ಯನೆಂದು ಶೃತಿತತಿಗಳು ಪೊಗಳುತಿರೆ ಅ ಪ

ತರುಣತನದಿ ದಿನದಾಟಿತು ಸುಮ್ಮನೆ
ಶರೀರದೊಳು ಸ್ವರವಾಡುತಲೆ
ತರುಣಿ ಸುತರು ಸಂಸಾರವೆಂಬ
ಶರಧಿಯೊಳಗೆ ಮುಳುಗಿರದೆ ಮನವೆ ೧

ಬಗೆ ಬಗೆ ಜನ್ಮದಿ ಜನಿಸಿದೆ ನಾಳೆಗೆ
ಸಿಗುವುದೆ ನಿಜದಿಂ ಈ ಸಮಯ
ಮುಗುಧನಾಗಿ ಮತ್ತೆ ಜನಿಸಿ ಬರುವುದು
ಸೊಗಸು ಕಾಣುವುದೆ ಛೀ ಮನವೆ ೨

ಚಿಂತೆಯನೆಲ್ಲ ಒತ್ತಟ್ಟಿಗೆ ಇಟ್ಟು
ಅಂತರಂಗದಲಿ ಧ್ಯಾನಿಸುತ
ಕಂತುಪಿತ ಕನಕಾದಿಕೇಶವನ
ಎಂತಾದರೂ ನೀ ಬಿಡಬೇಡ ಮನವೆ 3II

Rokka eradakku

ರೊಕ್ಕ ಎರಡಕ್ಕು ದುಃಖ ಕಾಣಕ್ಕ ಪ

ಮಕ್ಕಳ ಮರಿಗಳ ಮಾಡೋದು ರೊಕ್ಕ
ಸಕ್ಕರೆ ತುಪ್ಪವ ಸವಿಸೊದು ರೊಕ್ಕ
ಕಕ್ಕುಲತೆಯನು ಬಿಡಿಸೋದು ರೊಕ್ಕ
ಘಕ್ಕನೆ ಹೋದರೆ ಘಾತಕ ಕಾಣಕ್ಕ ೧

ನೆಂಟರ ಇಷ್ಟರ ಮರೆಸೋದು ರೊಕ್ಕ
ಕಂಟಕಗಳ ಪರಿಹರಿಸೋದು ರೊಕ್ಕ
ಗಂಟು ಕಟ್ಟಲಿಕ್ಕೆ ಕಲಿಸೋದು ರೊಕ್ಕ
ತುಂಟತನಗಳ ಬಲಿಸೋದು ರೊಕ್ಕ ೨

ಇಲ್ಲದ ಗುಣಗಳ ತರಿಸೋದು ರೊಕ್ಕ
ಸಲ್ಲದ ನಾಣ್ಯವ ನಡಿಸೋದು ರೊಕ್ಕ
ಬೆಲ್ಲಕಿಂತಲು ಬಹು ಸವಿಯಾದ ರೊಕ್ಕ
ಇಲ್ಲದಿರಲು ಬಹು ದುಃಖ ಕಾಣಕ್ಕ ೩

ಉಂಟಾದ ಗುಣಗಳ ಮರೆಸೋದು ರೊಕ್ಕ
ಬಂಟರನೆಲ್ಲರ ಬರಿಸೋದು ರೊಕ್ಕ
ಕಂಠಿ ಸರಿಗೆಯನ್ನು ಗಳಿಸೋದು ರೊಕ್ಕ
ಒಂಟೆ ಕುದುರೆ ಆನೆ ತರಿಸೋದು ರೊಕ್ಕ ೪

ವಿದ್ಯದ ಮನುಜರ ಕರೆಸೋದು ರೊಕ್ಕ
ಹೊದ್ದಿದ ಜನರನು ಬಿಡಿಸೋದು ರೊಕ್ಕ
ಮುದ್ದು ಪುರಂದರ ವಿಠಲನ ಮರೆಸುವ
ಬಿದ್ಹೋಗೋ ರೊಕ್ಕವ ಸುಡು ನೀನಕ್ಕ ೫II