Showing posts with label Dasarapadagalu. Show all posts
Showing posts with label Dasarapadagalu. Show all posts

Wednesday, November 3, 2010

Kaartika Maasagalalli

ದೀಪಾವಳಿಯ ನರಕ ಚತುದ೯ಶಿ ಶುಭದಿನದಂದು ಬ್ರಾಹ್ಮೀಮು ಹೂತ೯ದಲ್ಲೆದ್ದು ಕಾಮನ ಪಿತನನ್ನು ಸ್ಮರಿಸುತ್ತ ತೈಲಶಾಸ್ತ್ರ ಮಾಡುವುದು .

ಕಾತಿ೯ಕ ಮಾಸಗಳಲ್ಲಿ ಕಾಮನಪಿತನ ಪೂಜಿಸೆ IIಪII


ಕಾತಿ೯ಕ ಮಾಸಗಳಲ್ಲಿ ಕಾಮನ ಪಿತನ ಪೂಜಿಸಲುI
ಮಾಸಾಭಿಮಾನಿ ದಾಮೋದರನ ಭಜಿಸಿI
ಲೇಸು ಸ೦ಪಿಗೆ ಗ೦ಧೆಣ್ಣೆ ಸಮಪಿ೯ಸಿI
ಆ ಪುಣ್ಯ ಪುರುಷೋತ್ತಮನ ಕೊ೦ಡಾದುತI
ತೈಲ ಶಾಸ್ತ್ರವ ರಚಿಸಿ II೧II

ಪುಣ್ಯ ಸಾಧನದ ಜನರೆಲ್ಲ I ಬ್ರಾಹ್ಮೀಮೂಹೂತ೯ದ ಲೆದ್ದುII
ಚೆನ್ನಾಗಿ ಗೋವುಗಳ ತುಳಸಿ ಪೂಜೆಯಮಾಡಿ I
ಕಮ್ಮೆಣ್ಣೆ ಕಸ್ತೂರಿ ಕಪೂ೯ರ ವಿಳ್ಯವನಿತ್ತು I
ಪನ್ನ೦ಗಶಯನನ ಪಾದಕೆ ಸಮಪಿ೯ಸಿ I
ಗೋಪಿ - ಚಿನ್ನದಾರುತಿಯಬೆಳಗಿರೆ II೨II

ಸೃಷ್ಟಿಗೆ ಕತೃ೯ ಶ್ರೀಹರಿಯI
ಸೃಷ್ಟಿಸಿದನು ದೀಪಾವಳಿಯುI
ಉತ್ತಮ ಚತುದು೯ಶಿ ದಿನದಲಿ ಬಂದುI
ಮತ್ತೆ ನರಕಾಸುರನ ವಧಮಾಡಿ ಬಂದುI
ಉತ್ತಮ ಧರೆಗಿಳಿದ ಕೃಷ್ಣಹಯವದನಗೆ
ಮುತ್ತಿನಾರುತಿಯ ಬೇಳಗಿರೆ II೩II

Wednesday, September 22, 2010

Jayaraaya Jayaraaya

( image source: google search)
This Beautiful song is written by Vadirajyatigalu On sriJayathirtha also know as teekacharya whose brindava is in Malkhed ( Gulbarga district,karnataka state, India.)To know more about teekacharya follow the link below:
http://en.wikipedia.org/wiki/Jayatirtha


ಜಯರಾಯ ಜಯರಾಯ IIಪII

ಜಯರಾಯ ನಿನ್ನ ದಯವುಳ್ಳ ಜನರಿಗೆ
ಜಯವಿತ್ತು ಜಗದೊಳು ಭಯಪರಿಹರಿಸುವ IIಅಪII

ಖುಲ್ಲರಾದ ಮಾಯ್ಗಾ ಳ ಹಲ್ಲು ಮುರಿದು
ವಲ್ಲಭ ಜಗಕೆ ಶ್ರೀನಲ್ಲನೆ೦ದರುಹಿದಿ II೧II

ಮಧ್ವರಾಯರ ಮತ ಶುದ್ಧಶರಧಿಯೊಳು
ಉದ್ಭವಿಸಿದ ಗುರು ಸಿದ್ದಾ೦ತಸ್ಥಾಪಕ II೨II

ಸಿರಿಹಯವದನನ ಚರಣಕಮಲವನು
ಭರದಿ ಭಜಸುವರ ದುರಿತಗಳ ಹರಿಸುವ II೩II

Tuesday, September 21, 2010

vijayarayara kavacha ( smarisi badukiro)

ಸ್ಮರಿಸಿ ಬದುಕಿರೋ ದಿವ್ಯ ಚರಣ ಕೆರಗಿರೋ
ದುರಿತ ತರಿದು ಪೂರೆವ ವಿಜಯಗುರುಳೆ೦ಬರ IIಪII


ದಾಸರಾಯನಾ ದಯವ ಸೂಸಿ ಪಡೆದನಾ
ದೋಷ ರಹಿತನಾ ಸಂತೋಷ ಭರಿತನಾ II೧II

ಜ್ಞಾನವ೦ತನಾ ಬಲು ನಿಧಾನಿಶಾ೦ತನಾ
ಮಾನ್ಯವ೦ತನಾ ಬಹುವ ದಾನ್ಯದಾ೦ತನಾ II೨II

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷ ಸುರುಸುವ II೩II

ಮೋದ ಭರಿತನಾ ಪಂಚ ಭೇದವರಿತನಾ
ಸಾಧು ಚರಿತನಾ ಮನವಿಷಾದ ಮರೆತನಾ II೪II

ಇವರ ನಂಬಿದ ಜನಕೆ ಭವವಿದೆ೦ಬುದು
ಹವಣವಾಗದೋ ನಮ್ಮವರ ಮತವಿದು II೫II

ಪಾಪಕೋಟಿಯಾ ರಾಶಿ ಲೇಪವಾಗದೋ
ತಾಪಕಳೆವನೋ ಬಲು ದಯಾಪಯೋನಿಧಿ II೬II

ಕವನ ರೂಪದಿ ಹರಿಯಸ್ತವನ ಮಾಡಿದಾ
ಭುವನ ಬೇಡಿದ ಮಾಧವನ ನೋಡಿದಾ II೭II

ರಂಗನೆ೦ದರೆ ಭವವು ಹಿಂಗಿತೆ೦ದನ
ಮಂಗಳಾ೦ಗನಾ ಅಂತರಂಗವರಿತನ II೮II

ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನಾ ಉಲ್ಲಾಸತನದಲೀ II೯II

ಚಿಂತೆ ಬ್ಯಾಡಿರೋ ನಿಶ್ಚಿ೦ತರಾಗಿರೋ
ಶಾಂತ ಗುರುಗಳಾ ಪಾದವಾ೦ತು ನಂಬಿರೋ II೧೦II

ಖೇದವಾಗದೋ ನಿಮಗೆ ಮೋದ ವಾಹುದೋ
ಆದಿದೇವನಾ ಸುಪ್ರಸಾದ ವಾಹುದೋ II೧೧II

ತಾಪ ತಡೆವನೂ ಬಂದ ಪಾಪ ಕಡಿವನೂ
ಶ್ರೀಪತಿಯ ಪಾದ ಸಮೀಪವಿಡುವನೂ II೧೨II

ಗಂಗೆ ಮಿಂದರೆ ಮಲವು ಹಿ೦ಗಿತಲ್ಲದೆ
ರಂಗ ನೋಲಿಯನೂ ಭಕುತರ ಸಂಗದೊರೆಯದೆ II೧೩II

ವೇದ ಓದಲೂ ಬರಿದೆ ವಾದಮಾಡಲೂ
ಹಾದಿಯಾಗದೂ ಬುಧರಪಾದ ನಂಬದೆ II೧೪II

ಲೆಕ್ಕವಿಲ್ಲದಾ ದೇಶ ತುಕ್ಕಿ ಬಂದರೂ
ದುಃಖವಲ್ಲದೆ ಲೇಶ ಭಕುತಿ ದೂರಕದೂ II೧೫II

ದಾನ ಮಾಡಲೂ ದಿವ್ಯಗಾನ ಪಾಡಲೂ
ಜ್ಞಾನ ದೊರೆಯದೋ ಇವರಾಧಿನವಾಗದೇ II೧೬II

ಇಷ್ಟಿ ( ಯಜ್ಞ ) ಯಾತಕೆ ಕಂಡ ಕಷ್ಟ ವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ II೧೭II

ಪೂಜೆ ಮಾಡಲೋ ಕಂಡ ಗೋಜು ಬಿಳಲು
ಬೀಜ ಮಾತಿನ ಫಲ ಸಹಜದೂರಕದೋ II೧೮II

ಸುರರು ಎಲ್ಲರೊ ಇವರ ಕರವ ಪಿಡಿವರೂ
ತರಳ ರ೦ದದಿ ಹಿಂದೆ ತಿರುಗುತಿಪ್ಪರು II೧೯II

ಗ್ರಹಗಳೆಲ್ಲವೂ ಇವಗೆ೯ ಸಹಾಯ ಮಾಡುತಾ
ಆಹೋ ರಾತ್ರಿಲಿ ಸುಖದ ನಿವಹ ಕೂಡುವವೂ II೨೦II

ವ್ಯಾಧಿಬಾರದೋ ದೇಹ ಬಾಧೆ ತಟ್ಟದೋ
ಆದಿದೇವನಾ ಸುಪ್ರಸಾದ ವಾಹುದೋ II೨೧II

ಪತಿತಪಾಮರಾ ಮಂದಮತಿಯೂ ನಾ ಬಲೂ
ತುತಿಸಲಾಪೇನೆ ಇವರ ಅತಿಶಯ೦ಗಳಾ II೨೨II

ಕರುಣದಿ೦ದಲಿ ಎಮ್ಮ ಪೋರೆವನಲ್ಲದೆ
ದುರಿತ ಕೋಟಿಯಾ ಭಾಗ್ಯ ತರಿವದಯದಲೀ II೨೩II

ಮಂದ ಮತಿಗಳು ಇವರ ಚಂದವರಿಯದೇ
ನಿಂದಿಸುವರು ಭವದ ತಪ್ಪದೋ II೨೪II

ಇಂದಿರಾಪತಿ ಇವರ ಮು೦ದೆ ಕುಣಿವನೂ
ಅಂದವಚನವಾ ನಿಜಕೆ ತಂದು ತೋಪ೯ನು II೨೫II

ಉದಯಕಾಲದಿ ಈ ಪದವ ಪಠಿಸಲೂ
ಮದಡನಾದರೂ ಜ್ಞಾನ ಉದಯವಾಹುದೋ II೨೬II

ಸಟೆ ಯಿದಲ್ಲವೂ ವ್ಯಾಸ ವಿಠಲ ಬಲ್ಲನು
ಪಠಿಸಬಹುದಿದೂ ಕೇಳಿ ಕುಟಿಲ ರಹಿತರು II೨೭II

Audio link:
http://www.kannadaaudio.com/Songs/Devotional/Daasanaagu/VijayaraayaraKavacha.ram


V

Friday, September 10, 2010

Ambatanaya

( image source: google)

ಅ೦ಬಾತನಯ ಹೇ ಹೇರ೦ಬ IIಪII
ಕರುಣಾ೦ಬುಧೆ ತವ ಚರಣಾ೦ಬುಜಕೆರಗುವೆ IIಅಪII

ದಶನ ಮೋದಕ ಪಾಶಾ೦ಕುಶ ಪಾಣೆ
ಅಸಮ ನೀ ಚಾರುದೇಷ್ಣ ವ೦ದಿಪೆ II೧II

shreerayarublgspot.com
ವೃ೦ದಾರಕ ವೃ೦ದವ೦ದಿತ ಚರಣಾರ
ವಿ೦ದಯುಗಳ ದಯದಿಂದ ನೋಡು ಎನ್ನ II2II

ಯೂಥಪ ವದನ ಪ್ರದ್ಯೋತ ಸನೀಭ ಜಗ
ನ್ನಾಥವಿಠಲನ ಸ೦ಪ್ರೀತಿ ವಿಷಯ ಜಯ II೩II
Audio Link:
http://www.musicindiaonline.com/album/99-Kannada_Devotional/19452-Daasa_Kasturi/#/album/99-Kannada_Devotional/19452-Daasa_Kasturi/

Wednesday, August 4, 2010

Sulabha poojeya maadi /ಸುಲಭ ಪೂಜೆಯ ಮಾಡಿ

ಸುಲಭ ಪೂಜೆಯ ಮಾಡಿ ಬಲವಿಲ್ಲದವರು IIಪII
ನಳಿನ ನಾಭನ ಪಾದ ನಳಿನ ಸೇವಕರು IIಅಪII



ಇರುಳು ಹಚ್ಚುವ ದೀಪ ಹರಿಗೆ ನೀರಾಜನವು I ಮರೆಮಾಡುವ
ವಸ್ತ್ರ ಪರಮ ಮಾಡಿಯು II ತಿರುಗಾಡಿ ದಣಿಯುವು ದೆ ಹರಿಗೆ
ಪ್ರದಕ್ಷಿಣೆಯುII ಹೋರಳಿ ಮಲಗುವುದೆಲ್ಲ ಹರಿಗೆ ವ೦ದನೆಯು II೧II

shreerayarublogspot.com

ನುಡಿದ ಮಾತುಗಳೆಲ್ಲ ಕಡಲ ಶಯನನ ಜಪವು Iಮಡದಿ ಮಕ್ಕಳು
ಮತ್ತೆ ಒಡನೆ ಪರಿವಾರ II ನಡುಮನೆಯ ಅ೦ಗಳವು ಉಡುಪಿ ವೈಕು೦ಠಗಳು II
ಎಡಬಲದ ಮನೆಯವರು ಕಡು ಭಾಗವತರು II೨II


ಹೀಗೆ ಅನುದಿನ ತಿಳಿದು ಹಿಗ್ಗುವ ಜನರ ಭವ - ರೋಗ
ಪರಿಹರವು ಮೂಜಗದಿ ಸುಖವು II ಹೋಗುತಿದೆ ಈ ಆಯೂ ಬೇಗದಿಂದಲಿ
ನಮ್ಮ II ಯೋಗಿಶ ಪುರಂದರ ವಿಠಲನ ನೆನೆ ನೆನೆದು II೩II

Audio link:
http://www.kannadaaudio.com/Songs/Devotional/Ille-Vaikunta-Kaaniro-Sri-Vidyabhushana/Sulabha.ram



Thursday, April 22, 2010

Sakala grahabala neene

ಸಕಲ ಗ್ರಹಬಲ ನೀನೆ ಸರರಿಜಾಕ್ಷ ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೆ

ರವಿಚಂದ್ರ ಬುಧ ನೀನೆ ರಾಹು ಕೇತುವು ನೀನೆ ಕವಿ ಗುರು ಶನಿಯು ಮಂಗಳನು ನೀನೆ

ದಿವ ರಾತ್ರಿಯಲಿ ನೀನೆ ನವ ವಿಧಾನವು ಭವರೋಗ ಹರ ನೀನೆ ಬೇ ಷಜನು ನೀನೆ

ಪಕ್ಷಮಾಸವು ನೀನೆ ಪರ್ವ ಕಾಲವು ನೀನೆ ನಕ್ಷತ್ರ ಯೋಗ ತಿಥಿ ಕರಣ ನೀನೆ

ಅಕ್ಷಯವಾಗಿ ದ್ರೌಪದಿಯ ಮಾನವಕಾಯ್ದ ಪಕ್ಷಿವಾಹನ ನೀನೆ ರಕ್ಷಕನು ನೀನೆ

ಋತುವತ್ಸರವು ನೀನೆ ಪ್ರತ ಯುಗಾಡಿಯು ನೀನೆ ಕ್ರತು ಹೋಮ ಯಜ್ಞ ಸದ್ಗತಿಯು ನೀನೆ

ಜಿತವಾಗಿ ಎನ್ನೊಡೆಯ ಪುರಂದರವಿಠಲ ಶ್ರುತಿಗೆ ಸಿಲುಕದ ಮಹಾ ಮಹಿಮಾ ನೀನೆ

Saturday, April 17, 2010

Kula Kula Kulavendu

ಕುಲ ಕುಲ ಕುಲವೆಂದು ಹೊಡೆದಾ ಡದಿರಿ ನಿಮ್ಮ
ಕುಲದ ನೆಲೆಯನೆನಾದರೂ ಬಲ್ಲಿರಾ ಬಲ್ಲಿರ IIಪII


ಹುಟ್ಟದ ಯೋನಿಗಳಿಲ್ಲ ಮೆಟ್ಟಿದ ಭುಮಿಗ ಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಕೂಟಕಾಣಿಸ ಬಂದು ಹಿರಿದೆನು ಕಿರಿದೆನು
ನೆಟ್ಟನೆ ಸರ್ವಜ್ಞನ ನೆನೆಕ೦ಡ್ಯಾ ಮನುಜ II೧II
shreerayarublogspot
ಜಲವೇ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೆನಾದರು ಬಲ್ಲಿರಾ
ಜಲದೂ ಕುಳಿಯ೦ತೆ ಸ್ಥಿರವಲ್ಲ ಈ ದೇಹ
ನೆಲೆಯ ಅರಿತು ನೀ ನೆನೆಕ೦ಡ್ಯಾ ಮನುಜ II೨II

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿ ಕೇಶವ
ರಾಯನ ಚರಣ ಕಮಲವ ಕೀರ್ತಿಸುವನೆ ಕುಲಜ II೩II




Gangadi sakala

ಗ೦ಗಾದಿ ಸಕಲ ತಿಥ೯೦ಗಳ ಫಲವಿದು ಹರಿಯನಾಮ
ಹಿಂಗದೆ ಜನರಿಗೆ ಮ೦ಗಳಕರವಿದು ಹರಿಯನಾಮ

ವೇದಶಾಸ್ತ್ರಗಳ ಓದಲರಿಯದವಗೆ ಹರಿಯನಾಮ
ಆದಿಪುರುಷನ ಪೂಜಿಸದವಗೆ ಹರಿಯನಾಮ
ಸಾಧಿಸಬೇಕು ಮೋಕ್ಷವೆ೦ಬುವರಿಗೆ ಹರಿಯನಾಮ
ಶೋಧಿಸಿ ಇಟ್ಟ ಚಿನ್ನದ ಗಟ್ಟಿ ಕಾಣಿರೋ ಹರಿಯನಾಮ II೧II
shreerayarublogspt
ವ್ಯಾಳವ್ಯಾಳಕೆ ಎಚ್ಚರಿಕೆಯ ಕೊ ಡುವುದು ಹರಿಯನಾಮ
ಜಾಡಿಗೆ ಹೊನ್ನು ತು೦ಬಿಟ್ಟ೦ತೆ ಕಾಣಿರೋ ಹರಿಯನಾಮ
ಕಾಲನ ದೂತರ ತರಿದು ಬಿಸಡುವುದು ಹರಿಯನಾಮ
ಲೋಲ ಶ್ರೀ ಪುರಂದರವಿಠಲರಾಯನ ದಿವ್ಯನಾಮ II೨II

Friday, April 16, 2010

Guruvina gulama

ಗುರುವಿನ ಗುಲಾಮನಾಗುವ ತನಕ ದೂರೆಯದಣ್ಣ ಮುಕುತಿ
ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ IIಪII

ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡದೆ ಧೀರ ನೆನುತ ತಿರಿಗಿದರೇನು
(ನ್ಯಾಯ ಕಥೆಗಳ ಕೆಳ್ದರಿಲ್ಲ ಧಿರನಾಗಿ ತಾ ಪೇಳಿದರಿಲ್ಲ) II1II
shreerayarublogspot

ಕೊರಲೋಳು ಮಾಲೆ ಧರಿಸಿದರಿಲ್ಲ ಬೇರೆಳೂಳು ಜಪಮಣಿ ಎಣಿಸದರಿಲ್ಲ
ಮರುಳನಾಗಿ ತಾ ಶರಿರಕೆ ಬೂದಿ ಒರೆಸಿಕೊಂಡು ತಾನು ತಿರುದಿದಲ್ಲಿ II2II

ನಾರಿಯ ಭೂಗ ಅಳಿಸಿದರಿಲ್ಲ ಶರಿರಕೆ ಸುಖ ಬಿಡಿಸಿದರಿಲ್ಲ
ನಾರದ ವರದ ಪುರಂದರವಿಠಲನ ಸೇರಿಕೊಂಡು ತಾ ಪಡೆಯುವ ತನಕ II3II




Thursday, April 1, 2010

Hege Baredittu Prachinadali

ಹೇಗೆ ಬರೆದಿತ್ತು ಪ್ರಾಚಿನದಲ್ಲಿ
ಹಾಗೆ ಇರಬೇಕು ಸ೦ಸಾರದಲ್ಲಿ
ಪಕ್ಷಿ ಕೂತಿತು ಅ೦ಗ ಳದಲ್ಲಿ
ಹಾರಿಹೋಯಿತು ಆ ಕ್ಷಣದಲ್ಲಿ
ಆಡುವ ಮಕ್ಕಳು ಮನೆ ಕಟ್ಟಿದರು
ಆಟ ಸಾಕೆ೦ದು ಮುರಿದೂಡಿದರು
ಸ೦ತೆ ನೆರೆದಿತು ನಾನಾ ಪರಿ
ತಿರುಗಿ ಆಯಿತು ತಮ್ಮ ತಮ್ಮ ದಾರಿ
ವಸ್ತಿಕಾರನು ವಸ್ತಿಗೆ ಬಂದ
ಹೊತ್ತಾರೆ ಎದ್ದು ಊರಿಗೆ ಹೋದ
ಈ ಸ೦ಸಾರಮಾಯ ಬಿಡಿಸಿ
ಕಾಯೋ ಪುರಂದರವಿಠಲ II


Hege Baredittu Prachinadalli
Haage irabeku samsaaradalli
Pakshi kootitu angaladalli
haarihooyitu aakshanadalli
aaduva makkalu mane kattidaru
aata saakendu muridoodidaru
sante nereditu naanaa pari
tirugi aayitu tamma tamma daari
vastikaaranu vastige banda
hottare eddu urige hooda
ee samsaaramaaya bidisi
kaayoo PurandaraVithala

Friday, February 26, 2010

Pavana sambuta olidu

ಪವನ ಸ೦ಭೂತ ಒಲಿದು ತವಕದಿ ಕಾಯಬೇಕು
ಇವನಾರೋ ಎ೦ದು ಉದಾಸಿನ ಮಾದದಲೆನ್ನ

ಕಪಿಪಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು
ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು II ೧II

ಹರಿವೇಶಧರಣೆನರಹರಿ ಭಕುತರ ಪೋರೆವುದಕ್ಕೆ
ಹರಿಯ೦ತೆ ಒದಗುವೆಯೂ ನೀನು ಹರಿದಾಸನು ನಾನುII ೨II

ಅಜಸುತನ ಶಾಪದಿಂದ ಅಜಗರನಾದವನ ಪಾದ
ರಜಾದಿ ಪುನಿತನ ಮಾಡಿದನೇ ಅಜ ಪದವಿಗೆ ಬಹನೇ II೩ II

ಕಲಿಯುಗದಿ ಕವಿಗಗಳೆಲ್ಲ ಕಲಿಬಾಧೆಯಿಂದ ಬಳಲೆ
ಕಲಿವೈರಿಮುನಿಯೆ೦ದೆನಿಸಿದಿ ಕಲಿಮಲವ ಕಳೆದಿ II೪ II

ಗುರುಪ್ರಾಣೇಶವಿಠಲ ಹರಿ ಪರನೆ೦ಬೋಜ್ಞಾನ
ಗುರುಮಧ್ವರಾಯ ಕರುಣಿಸೂ ದುಮ೯ತಿಗಳ ಬಿಡಿಸೂII 5 II





http://www.kannadaaudio.com/Songs/Devotional/home/Daasanaagu.php

Monday, January 4, 2010

ಸಂಗ ವಾಗಲಿ ಸಾಧು ಸಂಗವಾಗಲಿ /Sangavaagali saadhu sanga vaagali

ಸಂಗ ವಾಗಲಿ ಸಾಧು ಸಂಗವಾಗಲಿ
sangavaagali saadhu sanga vaagali

ಸಂಗದಿಂದ ಲಿಂಗದೇಹ ಭ೦ಗವಾಗಲಿ
sangadinda lingadeha bhangavaagali

ಅಚ್ಯುತಾ೦ಘ್ರಿ ನಿಷ್ಠರ ಯದೃಚ್ಛಲಾಭ ತುಷ್ಟರ
Achyutaaghri nishthara yadrucchalaabhatushtara

ನಿಶ್ಚ ಯಾತ್ಮ ಜ್ಞಾನ ವುಳ್ಳ ಅಚ್ಚ ಭಾಗವತರ

nishchayaatmajnanavulla achhabhaagavatara

ತಂತ್ರಸಾರ ಅಷ್ಟು ಮಹಾಮಂತ್ರ ಪರಿಪೂರ್ಣ ಸ್ನೇಹ

tantrasaara ashtu mahaamantra paripoorna sneha
ಯಂತ್ರದಿಂದ ಬಿಗಿದು ಸ್ವತಂತ್ರ ಮೂರ್ತಿ ತಿಳಿದವರ
yantradinda bigidu swatantra murti tilidavara

ಪಂಚಭೇದ ಕೃಷ್ಣರಾಯನ ಪಂಚಮೂರ್ತಿ ತಿಳಿದವರ
panchabheda krishnaraayana panchmrti tilidavara


Thursday, December 31, 2009

Haridinadali unda nararige naraka

ಹರಿದಿನದಲ್ಲಿ ಉ೦ಡ ನರರಿಗೆ ಘೋರ ನರಕ ತಪ್ಪದೆಂದು ಶ್ರುತಿಯು ಸಾರುತಲಿದೆ IIಪII

ಗೋವ ಕೊಂದ ಪಾಪ ಸಾವಿರ ವಿಪ್ರರ -ಜೀವ ಹತ್ಯಯ ಮಾಡಿದ ಪಾಪವು
ಭಾವಜನಯ್ಯನ ದಿನದಲು೦ಡವರಿಗೆ ಕೀವಿನೂಳಗೆ ಹಾಕಿ ಕುದಿಸುವ ಯಮನುII ೧II

ಒ೦ದೋ೦ದು ಅಗಳಿಗೆ ಕೋಟಿ ಕೋಟಿ ಕ್ರಿಮಿ ಅ೦ದಿನ ಅನ್ನವು ನಾಯ್ ಮಾ೦ಸವು
ಮ೦ದರಧರ ದಿನದಲು೦ಡವರನು ಹಂದಿಯ ಸುಡುವಂತೆ ಸುಡಿಸುವ ಯಮನು II೨ II

ಅಣ್ಣ ಉದಕ ತಾ೦ಬುಲ ದಪ೯ಣಗಳು - ಚೆನ್ನ ವಸ್ತ್ರಗಳೆಲ್ಲ ವಜಿ೯ತವು
ತನ್ನ ಸತಿಯ ಸಂಗ ಮಾಡುವ ಮನುಜನ ಬೆನ್ನಲಿ ತೆಗೆಸುವ ಯಮನು II೩ II

ಜಾವದ ಜಾಗ್ರರ ಕ್ರತು ನಾಲ್ಕು ಸಾವಿರ ಜಾವ ನಾಲ್ಕರ ಫಲಕೆ ಮಿತಿಯಿಲ್ಲವು
ದೇವದೆವನ ದಿನದಿ ನಿದ್ರೆಗೈದರೆ ಹುರಿಗಾವಲಿನೂಳು ಹಾಕಿ ಹರಿಸುವ ಯಮನು II೪II

ಇಂತು ಏಕಾದಶಿ ಉಪವಾಸ ಜಾಗರ ಸ೦ತತ ಕ್ಷಿರಾಬ್ದಿಶಯಣನ ಪೂಜೆ
ಸ೦ತೋಷದಿಂದಲಿ ಮಾಡಿದ ಜನರಿಗನ೦ತ ಫಲವನೀವ ಪುರಂದರವಿಠಲ II೫ II

Wednesday, December 30, 2009

Ondu Baari smarane saalade

ಒಂದು ಬಾರಿ ಸ್ಮರಣೆ ಸಾಲದೆ IIಪII
ಆನ೦ದತೀಥ೯ರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರ IIಅಪII

ಹಿ೦ದನೆಕ ಜನ್ಮಗಳಲಿ ನೊ೦ದು ಯೋನಿಗಳಲಿ ಬಂದು
ಇಂದಿರೆಶನ ಹರಿಯ ಪಾದವ ಹೊ೦ದಬೆಕೆ೦ಬುವರಿಗೆ II II

ಪ್ರಕೃತಿ ಬ೦ಧನದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊ೦ದು
ಅಕ೦ಕಚರಿತ ಹರಿಯ ಪಾದಭಾಕುತಿ ಬೇಕೆ೦ಬುವರಿಗೆ II೨ II

ಆರುಮಂದಿ ವೈರಿಗಳನು ಸೆರಿಸಲಿಸದ೦ತೆ ಜರಿದು
ಧೀರನಾಗಿ ಹರಿಯ ಪಾದವ ಸೇರಬೇಕೆ೦ಬುವರಿಗೆ II II

ಘೋರ ಸ೦ಸಾರಾ೦ಬುಧಿಗೆ ಪರಮಜ್ಞಾನ ವೆ೦ಬ ವಾಡೆ
ಏರಿ ಮೆಲ್ಲನೆ ಹರಿಯ ಪಾದ ಸೇರಬೇಕೆ೦ಬುವರಿಗೆ II೪ II

ಹಿನಬುದ್ಧಿಯಿಂದ ಶ್ರೀಹಯವದನನ್ನ ಜರಿದು
ತಾನು ಬದುಕಳರಿಯದಿರಲು ತೋರಿ ಕೊಟ್ಟ ಮಧ್ವಮುನಿಯು II೫II

Saturday, December 5, 2009

kallu sakkare Kolliroo





ಕಲ್ಲು ಸಕ್ಕರೆ ಕೊಳ್ಳಿರೂ ನೀವೆಲ್ಲರೂ
ಕಲ್ಲು ಸಕ್ಕರೆ ಕೊಳ್ಳಿರೂ
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು
ಪುಲ್ಲ ಲೋಚನ ಶ್ರೀಕೃಷ್ಣನಾಮವೆಂಬ

ಎತ್ತು ಹೇರುಗಳಿಂದ ಹೊತ್ತು ಮಾರುವದಲ್ಲ
ಒತ್ಯೋತ್ತಿ ಗೋಣಿ ಯೋಳ್ತುತು೦ಬುವದಲ್ಲ
ಎತ್ತ ಹೋದರು ಬಾಡಿಗೆ ಸು೦ಕವಿದಕೀಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ II೧II

ನಷ್ಟ ಬಿಳುವದಲ್ಲ ನಾತ ಹುಟ್ಟುವದಲ್ಲ
ಎಷ್ಟು ಒಯ್ದರು ಬೆಲೆ ರೋಕ್ಕವಿದಕೀಲ್ಲ
ಕಟ್ಟಿರುವೆಯು ತಿಂದು ಕಡಿಮೆಯಾಗುವದಲ್ಲ
ಪಟ್ಟಣದೊಳಗೆ ಪ್ರಸಿದ್ಧ ವಾಗಿರುವಂಥ II೨II


ಸಂತೆ ಸಂತೆಗೆ ಹೋಗಿ ಶ್ರಮಪಡಿಸುವದಲ್ಲ
ಸಂತೆಯೊಳಗೆ ಇಟ್ಟು ಮಾರುವದಲ್ಲ
ಸಂತತ ಸಂತರ ನಾಲಿಗೆ ಸವಿ ಗೋ೦ಮಬ
ಕಾಂತ ಪುರಂದರ ವಿಠಲನ ನಾಮವೆಂಬ II3II

Sunday, November 22, 2009

Teeliso Ella

ತೇಲಿಸೋ ಇಲ್ಲ ಮೂಳುಗಿಸೂ
ನಿನ್ನ ಕಾಲಿಗೆ ಬಿದ್ದೇನೂ ಪರಮಕೃಪಾಳೂ


ಸತಿಸುತ ಧನದಾಸೇ ಎ೦ದೆ೦ಬ ಮೋಹದಿ
ಹಿತದಿ೦ದ ಅತಿನೋ೦ದು ಬೇ೦ಡಾದೆನೋ
ಗತಿ ಕೂಡುವರ ಕಾಣೆ ಮತಿಯ ಪಾಲಿಸೂ ಲಕ್ಷ್ಮಿ
ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ II೧II


ಜರೆರೋಗ ದಾರಿದ್ರ್ಯ ಕಲ್ಮಶವೆ೦ಬ
ಶರಧಿಯೂಳಗೆ ಬಿದ್ದು ಮುಳುಗಿದೇನೂ
ಸ್ಥಿರವಲ್ಲ ದೇಹವು ನೆರೆ ನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೂ ಹರಿಯೇ II೨ II


ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸ ಹೂದೇನೂ ಭಕ್ತಿರಸವ ಬಿಟ್ಟು
ಶೇಷಶಯನ ಶ್ರೀ ಪುರಂದರವಿಠಲನೆ
ದಾಸರ ಸ೦ಗವಿತ್ತು ಪಾಲಿಸೂ ಹರಿಯೇ II೩II

Sripatiyu namage sampadaviyali

ಶ್ರೀಪತಿಯು ನಮಗೆ ಸ೦ಪದವಿಯಲಿ
ವಾಣಿಪತಿಯು ನಮಗೆ ದೀಘಾ೯ಯು ಕೊಡಲಿ

ವರಬುಧರನು ಪೋರೆಯೇ ವಿಷವ ಕ೦ಠದಲ್ಲಿಟ್ಟ
ಹರ ನಿತ್ಯ ನಮಗೆ ಸಹಾಯ ಮಾಡಲಿ
ನರರೂಳುನತವಾದ ನಿತ್ಯ ಭೋಗ೦ಘಲನು
ಪುರುಹೂತ ಪೂರ್ಣ ಮಾಡಿಸಲಿ ನಮಗೆ II೧II

ವಿನುತ ಸಿದ್ಧಿಪ್ರದನು ವಿಘನ್ನೆಶನ ದಯದಿ೦ದ
ನೆನೆದ ಕಾಯ೯ಗಲೆಲ್ಲ ನೆರವೇರಲಿ
ದಿನದಿನದಿ ಧನ್ವ೦ತ್ರಿ ಆಪತ್ತುಗಳ ಕಳೆದು
ಮನಹರುಷ ವಿತ್ತು ಮನಿಸಲಿ ಬಿಡದೆ II೨ II


ನಿರುತ ಸುಜ್ಞಾನವನು ಈವ ಗುರು ಮದ್ವಾರಾಯ
ಗುರುಗಳಾಶೀವಾ೯ದ ನಮಗಾಗಲಿ
ಪುರಂದರವಿಠಲನ ಕರುಣೆಯೆ೦ದಲಿ ನಿತ್ಯ
ಸುರರೋಲುಮೇ ನಮಗೇ ಸುಸ್ಥಿರವಾಗಲಿII
೩II

Monday, November 9, 2009

Elelu sharadhiya

ಏಳೇಳು ಶರಧಿಯು ಏಕವಾಗಿದೆ ಕಂಡ್ಯ
ಹೇಗೆ ಬಂದೆ ಹೇಳೋ ಕೋತಿ IIಪII
ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿ ಲಂಘಿಸಿ ಬಂದೆ ಭೂತ IIಅಪII

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ
ಹೇಗೆ ಬಿಟ್ಟರು ಹೇಳೊ ಕೋತಿ
ಏಳು ಸಮುದ್ರದ ಮಕರಿ ಮತ್ಸ್ಯದ ಕೂಡೆ
ಮಾತಾಡಿ ಬಂದೆನೊ ಭೂತ II1II


ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು
ಹೇಗೆ ಬಿಟ್ಟಳು ಹೇಳೊ ಕೋತಿ
ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು
ಬಿಂಕದಿಂದಲಿ ಬಂದೆ ಭೂತ II2II

ಕೊಂಬೆಕೊಂಬೆಗೆ ಕೋಟಿಮಂದಿ ರಾಕ್ಷಸರಿರೆ
ಹೇಗೆ ಬಿಟ್ಟರು ಪೇಳೊ ಕೋತಿ
ಕೊಂಬೆ ಕೊಂಬೆಗೆ ಕೋಟಿಮಂದಿ ರಾಕ್ಷಸರನ್ನು
ಕೊಂದ್ಹಾಕಿ ಬಂದೆನೊ ಭೂತ II3II

ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು
ಯಾಕೆ ಬಂದೆ ಹೇಳೊ ಕೋತಿ
ಯಾವ ವನದೊಳಗೆ ಜಾನಕಿದೇವಿ ಇದ್ದಾಳೊ
ಅವಳ ನೋಡಬಂದೆ ಭೂತ II4II

ದಕ್ಷಿಣಪುರಿ ಲಂಕದಾನವರಿಗಲ್ಲದೆ
ತ್ರ್ಯಕ್ಷಾದ್ಯರಿಗಳವಲ್ಲ ಕೋತಿ
ಪಕ್ಷಿಧ್ವಜ ರಾಮನ ಅಪ್ಪಣೆಯೆನಗಿಲ್ಲ
ಈಕ್ಷಣ ತಪ್ಪಿಸಿಕೊಂಡೆ ಭೂತ II5 II

ದೂತನಗಿಹೆ ಎನ್ನ ಕೈಯೊಳು ಸಿಕ್ಕಿಹೆ
ಕೋಪವಿನ್ನೇತಕ್ಕೊ ಕೋತಿ
ನಾ ತಾಳಿಕೊಂಡಿಹೆನೋ ಈ ಕ್ಷಣದಿ ಲಂಕೆ
ನಿರ್ಧೂಮವನು ಮಾಳ್ಪೆ ಭೂತ II6II


ನಿಮ್ಮಂಥ ದಾಸರು ನಿಮ್ಮರಸನ ಬಳಿ
ಎಷ್ಟು ಮಂದಿದ್ದಾರೆ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು
ಕೋಟ್ಯಾನುಕೋಟಿಯೊ ಭೂತ II7 II

ಎಲ್ಲಿಂದ ನೀ ಬಂದೆ ಏತಕ್ಕೆಲ್ಲರ ಕೊಂದೆ
ಯಾವರಸನ ಬಂಟ ಕೋತಿ
ಚೆಲ್ವಯೋದ್ಯಾಪುರದರಸು ಜಾನಕಿಪತಿ
ರಾಮಚಂದ್ರನ ಬಂಟ ಭೂತ II8 II

ಸಿರಿರಾಮಚಂದ್ರನು ನಿನ್ನರಸನಾದರೆ
ಆತ ಮುನ್ನಾರ‍್ಹೇಳೋ ಕೋತಿ
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ ಶ್ರೀ
ಪುರಂದರವಿಠಲನೊ ಭೂತ II9II

Friday, October 30, 2009

Aavasiyali neenu enna

ಆವಸಿರ್ಯಲಿ ನೀನು ಎನ್ನ ಮರೆತೆ
ದೇವ ಜಾನಕಿರಮಣ ಪೇಳು ರಘುಹ್ಪತಿಯೆ ಪ

ಸುರರ ಸೆರೆಯನು ಬಿಡಿಸಿ ಬಂದೆನೆಂಬ ಸಿರಿಯೆ
ಶರಧಿ ಸೇತುವೆಯ ಕಟ್ಟಿದೆನೆನ್ನುವ ಸಿರಿಯೆ

ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ ೧
ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬ ಸಿರಿಯೆ


ಮೃದ ನಿನ್ನ ಸಖನಾದನೆಂಬ ಸಿರಿಯೆ
ಬಿಡದೆ ದ್ರೌಪದಿ ಮಾನ ಕಾಯ್ದೆನೆಂಬ ಸಿರಿಯೆ
ದೃಢ ವಾಗಿ ಹೇಳೆನಗೆ ದೇವಕಿ ಸುತನೆ ೨

ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ
ಕಾಮ ನಿನ್ನ ಸುತನಾದ ನೆಂಬ ಸಿರಿಯೆ
ಆ ಮಹಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ
ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ ೩

ಮನುಜರೆಲ್ಲ್ರು ನಿನ್ನ ಸುತ್ತಿಸುವರೆಂಬ ಸಿರಿಯೆ
ಹನುಮ ನಿನ್ನ ಬಂಟನಾದನೆಂಬ ಸಿರಿಯೆ
ಬಿನುಗುದೈವಗಳು ನಿನಗೆಣ್ಯಿಲ್ಲವೆಂಬ ಸಿರಿಯೆ
ಅನುಮಾನ ಮಾಡದೆ ಪೇಳೊ ನರಹರಿಯೆ ೪

ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ
ಪಂಥವೆ ನಿನಗಿದು ಆವ ನಡತೆ
ಕಂತುಪಿತ ಕಾಗಿನೆಲೆಯದಿಕೇಶವ ರಂಗ
ಚಿಂತೆಯನು ಬಿಡಿಸಿ ಸಂತೋಷಪಡಿಸೊ ೫

Aarambhadali namipe

ಆರಂಭದಲಿ ನಮಿಪೆ ಬಾಗಿಶಿರವ
ಹೇರಂಬ ನೀನೊಲಿದು ನೀಡೆನಗೆ ವರವ

ದ್ವಿರದವದನನೆ ದ್ವಿರದವರದನ ಮಹಿಮೆ
ಹರುಷದಲಿ ಕರ ಜಿಹ್ವೆ ಎರಡರಿಂದ
ಬರೆದು ಪಾಡುವುದಕ್ಕೆ ಬರುವ ವಿಘ್ನವ ತರಿದು
ಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು

ಕುಂಬಿಣಿಜಿಪತಿರಾಮ -ಜಂಬಾರಿ ಧರ್ಮಜರು
ಅಂಬರಾದಿಪ ರಕುತಾಂಬರನೆ ನಿನ್ನ
ಸಂಬ್ರಮದಿ ಪೂಜಿಸಿದರೆಂಬ ವಾರುತಿ ಕೇಳಿ
ಹಂಬಲವ ಸಲಿಸೆಂದು ನಂಬಿ ನಿನ್ನಡಿಗಳಿಗೆ

ಸೋಮಶಾಪದ ವಿಜಿತಕಾಮ ಕಾಮಿತದಾತ
ವಾಮದೇವನ ತನಯ ನೇಮದಿಂದಾ
ಶ್ರಿಮನೊಹರನಾದ ಶ್ಯಾಮಸುಂದರಸ್ವಾಮಿ
ನಾಮನೆನೆಯುವ ಭಾಗ್ಯ ಪ್ರೆಮದಲಿ ಕೊಡು ಎಂದು