Thursday, April 29, 2010

Esabeku iddu jaisabeeku

ಈಸಬೇಕು ಇದ್ದು ಜೈಸಬೇಕು
ಹೇಸಿಗೆ ಸ೦ಸಾರದಲ್ಲಿ ಆಸೆ ಲೇಶ ಇಡದ್ಹಾ೦ಗೆ IIಪII


ತಾಮರಸ ಜಲದ೦ತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ
ಕಾಮಿತ ಕೈಗೊ೦ಬರೆಲ್ಲ II೧II


ಗೇರು ಹಣ್ಣಿನಲ್ಲಿ ಬೀಜ ಸೇರಿದ೦ತೆ ಸ೦ಸಾರದಿ
ಮೀರಯಾಸೆ ಮಾಡದಲೆ
ಧೀರ ಕೃಷ್ಣನ ಭಕುತರೆಲ್ಲ II೨II


ಮಾ೦ಸದಾಸೆಗೆ ಮತ್ಸ್ಯ ಸಿಲುಕಿ
ಹಿ೦ಸೆಪಡುವ ಪರಿಯೊಳು
ಮೋಸ ಹೋಗದ್ಹಾ೦ಗೆ ಜಗ
ದೀಶ ಪುರಂದರವಿಠಲನ ನೆನೆದು II೩II

Tuesday, April 27, 2010

Manava janma doddadu

ಮಾನವ ಜನ್ಮ ದೊಡ್ಡದು ಅದ
ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ IIಪII

ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ
ಮಣ್ಣು ಮುಕ್ಕಿ ಹುಚ್ಚರಾಗುವರೆ ( ಮರುಳಾಗುವರೆ)
ಹೆಣ್ಣು ಮಣ್ಣಿಗಾಗಿ ಹರಿಯನಾಮಾಮೃತ
ಉಣ್ಣದೆ ಉಪವಾಸ ಇರುವರೇ ಖೋಡಿ II೧II

ಕಾಲನ ದೂತರು ಕಾಲ್ಪಿಡಿದೆಳೆವಾಗ
ತಾಳು ತಾಳೆ೦ದರೆ ತಾಳುವರೆ
ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ
ಹಾಳು (ಸುಳ್ಳಿನ ) ಸ೦ಸಾರದ ಸುಳಿಗೆ ಸಿಕ್ಕಲುಬೇಡಿ II೨II

ಏನು ಕಾರಣ ಯದುಪತಿಯನ್ನು ಮರೆತಿರಿ
ಧನಧಾನ್ಯ ಮಕ್ಕಳು ಸಲಹುವರೆ
ಇನ್ನಾದರು ಏಕೋಭಾವದಿ ಭಜಿಸಿರೋ
ಚೆನ್ನ ಪುರಂದರವಿಠಲರಾಯನ II3II


Maanava janma doddadu ada
haani maadalu beedi hucchappa galira

kannu kaikaal kiwi naalige iralikke
mukki huccharaaguvare ( marulaaguvare)
hennu mannigaagi hariyanaamamruta
unnade upavaasa iruvare khodi

kaalana dootaru kalpididelevaaga
taalu taalendare taaluvare
dhalibaarada munna dharmagalisiroo
haalu ( sullina) samsaarada sulige sikkalu beedi

eenu kaarana yadupatiyannu maretiri
dhanadhanya makkalu salahuvare
innadaru ekoobhaavadi bhajisiroo
chenna purandaravithalaraayana


Yaare Rangana Yaare Krishnana

ಯಾರೇ ರಂಗನ ಯಾರೇ ಕೃಷ್ಣನ
ಯಾರೇ ರಂಗನ ಕರೆಯಬಂದವರು
Yaare rangana yaare krishnana
yaare rangana kareyabandavaru

ಗೋಪಾಲ ಕೃಷ್ಣನ ಪಾಪ ವಿನಾಶನ
ಈ ಪರಿಯಿಂದಲಿ ಕರೆಯಬಂದವರು 1
gopalakrishnana paapavinaashana
eepariyindali kareyabandavaru


ವೇಣು ವಿನೋದನ ಪ್ರಾಣಪ್ರೀಯನ
ಜಾಣೆಯರರಸನ ಕರೆಯಬಂದವರು 2
veenu vinodana pranapriyana
jaaneyararasana kareyabandavaru
shreerayarublogspot
ಕರಿರಾಜವರದನ ಪರಮಪುರುಷನ
ಪುರಂದರವಿಠಲನ ಕರೆಯಬಂದವರು ೩
kariraajavaradana paramapurushana
purandaravithalana kareyabandavaru



Saturday, April 24, 2010

Hari Smarane maadoo

ಹರಿಸ್ಮರಣೆಮಾಡೋ ನಿರ೦ತರ

ಪರಗತಿಗೆ ಇದು ನಿಧಾ೯ರ

ದುರಿತ ಗಜಕ್ಕೆ ಕ೦ಠೀರವನೆನಿಸಿದ
ಶರಣಾಗತ ರಕ್ಷಕ ಪಾವನನಾ II೧II

ಸ್ಮರಣೆಗೈದ ಪ್ರಹಲ್ಲಾದನ ರಕ್ಷಿಸಿದ
ದುರುಳು ಹಿರಣ್ಯಕನುದರವ ಸೀಳಿದII ೨II

ತರುಣಿ ದ್ರೌಪದಿ ಮೂರೆಯಿ ಡಲಾಕ್ಷಣ
ಭರದಿಂದಕ್ಷಯವಿತ್ತ ಮಹಾತ್ಮನ II೩II

shreerayarublogspot

ಅ೦ದು ಅಜಮಿಳ ಕ೦ದನ ಕರೆಯಲು
ಬಂದು ಸಲಹಿ ಆನ೦ದವ ತೋರಿದ II೪II

ಶ್ರೀಪುರಂದರ ವಿಠಲರಾಯನ
ಸೃಷ್ಟಿ ಗೊಡೆಯನ ಮುಟ್ಟಿಭಜಿಸುವ II೫II

Enagu aane Ranga

ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ

ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ II1II
shreerayarublogspot
ತನುಮನಧನದಲ್ಲಿ ವ೦ಚಕನಾದರೆ ಎನಗೆ ಆಣೆ ರಂಗ
ಮನಸ್ಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ II2II

ಕಾಕು ಮನುಜರ ಸ೦ಗದಿ ಮಾಡಿದರೆನಗೆ ಆಣೆ ರಂಗ
ಲೌಕೀಕವ ಬಿಡಿಸದಿದ್ದರೆ ನಿನಗೆ ಆಣೆ II3II

ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆII4II

ಹರಿನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ
ಪುರಂದರವಿಠಲ ನೀನೋಲಿಯದಿದ್ದರೆ ನಿನಗೆ ಆಣೆII5II


Enagu aane ranga ninagu aane
enagu ninagu ebbarigu aane

ninna bittu anyara bhajisidarenage aane ranga
enna nii kai bittu poodare ninage aane

tanumanadhanadalli vanchakanaadare enage aane
manassu ninnalli nilisadiddare ninage aane

kaaku manujara sanga maadidarenage aaane ranga
lowkikava bidisadiddare ninage aane

shishtara sangava madadiddare enage aane ranga
dushtara sangava bidisadiddare ninage aane

Hari ninnashraya maadadiddare enage aane ranga
purandaravithala niinooliyadiddare ninage aane

http://www.kannadaaudio.com/Songs/Compilations/Saththavana-Neralu/Enagu-Aane.ram

Friday, April 23, 2010

Dangurava saari

ಡಂಗುರವ (ಸಾರಿರಯ್ಯ ) ಸಾರಿ ಹರಿಯ ಡಿಂಗರೀಗರೆಲ್ಲರೂ ಭೂ
ಮಂಡಲಕ್ಕೆ ಪಾಂಡುರಂಗ ವಿಠ್ಥಲನೆ ಪರದೈವ ವೆಂದು

ಹರಿಯು ಮುಡಿದ ಹೋವು ಹರಿವಾಣದೊಳಗಿಟ್ಟುಕೊಂಡು
ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಾಳಿಕ್ಕುತ II1II



ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಢಂಢಂ ಢಣಾ ಢಣಾರೆಂದು ಹೊಡೆದು ಚಪ್ಪಾಳಿಕ್ಕುತ II2II


shreerayarublogspot

ಇಂತು ಜಗಕೆಲ್ಲ ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಸಂತತ ಶ್ರೀಪುರಂದರವಿಠಲ ಪರದೈವವೆಂದುII3II


Audio Link:
http://www.kannadaaudio.com/Songs/Devotional/SriVidyabhushana/DaasaraKritigalu/DanguravaSaariHariya.ram

Shiva Tandava stotram

ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೆ
ಗಲೇವಲಂಬ್ಯ ಲಮ್ಬಿತಾಂ ಭುಜಂಗತುಂಗಮಾಲಿಕಾಮ್
ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ
ಚಕಾರ ಚಂಡಾಂಡವಂ ತನೊತು ನಃ ಶಿವಃ ಶಿವಮ್ II೧II

ಜಟಾಕಟಾಹಸಂಭ್ರಮಭ್ರಮನ್ನಿಲಿಂಪನಿರ್ಝರೀ
ವಿಲೋಲವೀಚಿವಲ್ಲರೀವಿರಾಜಮಾನಮೂರ್ಧನಿ
ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೆ
ಕಿಶೋರಚಂದ್ರಶೇಖರೇ ರತಿಃ ಪ್ರತಿಕ್ಷಣಂ ಮಮ II೨II

ಧರಾಧರೇಂದ್ರನಂದಿನೀವಿಲಾಸಬಂಧುಬಂಧುರ
ಸ್ಫುರದ್ದಿಗಂತಸಂತತಿಪ್ರಮೋದಮಾನಮಾನಸೆ
ಕೃಪಾಕಟಾಕ್ಷಧೊರಣೀನಿರುದ್ಧದುರ್ಧರಾಪದಿ
ಕ್ವಚಿದ್ದಿಗಂಬರೇ ಮನೋ ವಿನೋದಮೆತು ವಸ್ತುನಿ II೩II

ಲತಾಭುಜಂಗಪಿಂಗಲಸ್ಫುರತ್ಫಣಾಮಣಿಪ್ರಭಾ
ಕದಂಬಕುಂಕುಮದ್ರವಪ್ರಲಿಪ್ತದಿಗ್ವಧೂಮುಖೆ
ಮದಾಂಧಸಿಂಧುರಸ್ಫುರತ್ತ್ವಗುತ್ತರೀಯಮೆದುರೆ
ಮನೋ ವಿನೋದಮದ್ಭುತಂ ಬಿಭರ್ತು ಭೂತಭರ್ತರಿ II೪II

ಸಹಸ್ರಲೋಚನಪ್ರಭೃತ್ಯಶೇಷಲೇಖಶೇಖರ
ಪ್ರಸೂನಧೂಲಿಧೋರಣೀ ವಿಧೂಸರಾಂಘ್ರಿಪೀಠಭೂಃ
ಭುಜಂಗರಾಜಮಾಲಯ ನಿಬದ್ಧಜಾಟಜೂಟಕ
ಶ್ರಿಯೈ ಚಿರಾಯ ಜಾಯತಾಂ ಚಕೋರಬಂಧುಶೇಖರಃ II೫II

ಲಲಾಟಚತ್ವರಜ್ವಲದ್ಧನಂಜಯಸ್ಫುಲಿಂಗಭಾ
ನಿಪೀತಪಂಚಸಾಯಕಂ ನಮನ್ನಿಲಿಂಪನಾಯಕಮ್
ಸುಧಾಮಯೂಖಲೇಖಯಾ ವಿರಾಜಮಾನಶೇಖರಂ
ಮಹಾಕಪಾಲಿಸಂಪದೆಶಿರೋಜಟಾಲಮಸ್ತು ನಃ II೬II

ಕರಾಲಭಾಲಪಟ್ಟಿಕಾಧಗದ್ಧಗದ್ಧಗಜ್ಜ್ವಲ
ದ್ಧನಂಜಯಾಹುತೀಕೃತಪ್ರಚಂಡಣ್ಡಪಂಚಸಾಯಕೆ
ಧರಾಧರೇಂದ್ರನಂದಿನೀಕುಚಾಗ್ರಚಿತ್ರಪತ್ರಕ
ಪ್ರಕಲ್ಪನೈಕಶಿಲ್ಪಿನಿ ತ್ರಿಲೋಚನೆ ರತಿರ್ಮಮ II೭II

ನವೀನಮೇಘಮಂಡಲೀ ನಿರುದ್ಧದುರ್ಧರಸ್ಫುರತ್
ಕುಹೂನಿಶೀಥಿನೀತಮಃ ಪ್ರಬಂದಬದ್ಧಕಂದರಃ
ನಿಲಿಂಪನಿರ್ಝರೀಧರಸ್ತನೋತು ಕೃತ್ತಿಸಿಂಧುರಃ
ಕಲಾನಿಧಾನಬಂಧುರಃ ಶ್ರಿಯಂ ಜಗದ್ಧುರಂಧರಃII ೮II
shreerayarublogspot
ಪ್ರಫುಲ್ಲನೀಲಪಂಕಜಪ್ರಪಂಚಕಾಲಿಮಪ್ರಭಾ
ವಲಂಬಿಕಂಠಕಂದಲೀರುಚಿಪ್ರಬದ್ಧಕಂದರಮ್
ಸ್ಮರಚ್ಛಿದಂ ಪುರಚ್ಛಿದಂ ಭವಚ್ಛಿದಂ ಮಖಚ್ಛಿದಂ
ಗಜಚ್ಛಿದಾಂಧಕಛಿದಂ ತಮಂತಕಚ್ಛಿದಂ ಭಜೆ II೯II

ಅಗರ್ವ ಸರ್ವಮಂಗಲಾಕಲಾಕದಂಬಮಂಜರೀ
ರಸಪ್ರವಾಹಮಾಧುರೀ ವಿಜೃಂಭಣಾಮಧುವ್ರತಮ್
ಸ್ಮರಾನ್ತಕಂ ಪುರಾನ್ತಕಂ ಭವಾನ್ತಕಂ ಮಖಾನ್ತಕಂ
ಗಜಾನ್ತಕಾನ್ಧಕಾನ್ತಕಂ ತಮನ್ತಕಾನ್ತಕಂ ಭಜೆ II೧೦II

ಜಯತ್ವದಭ್ರವಿಭ್ರಮಭ್ರಮದ್ಭುಜಂಗಮಶ್ವಸ
ದ್ವಿನಿರ್ಗಮತ್ಕ್ರಮಸ್ಫುರತ್ಕರಾಲಭಾಲಹವ್ಯವಾಟ್
ಧಿಮಿದ್ಧಿಮಿದ್ಧಿಮಿಧ್ವನನ್ಮೃದಂಗತುಂಗಮಂಗಲ
ಧ್ವನಿಕ್ರಮಪ್ರವರ್ತಿತ ಪ್ರಚಂಡತಾಂಡವಃ ಶಿವಃ II೧೧II

ಸ್ಪೃಷದ್ವಿಚಿತ್ರತಲ್ಪಯೊರ್ಭುಜಂಗಮೌಕ್ತಿಕಸ್ರಜೊರ್
ಗರಿಷ್ಠರತ್ನಲೋಷ್ಠಯೋಃ ಸುಹೃದ್ವಿಪಕ್ಷಪಕ್ಷಯೋಃ
ತೃಷ್ಣಾರವಿಂದಚಕ್ಷುಷೋ ಪ್ರಜಾಮಹೀಮಹೇಂದ್ರಯೋಃ
ಸಮಪ್ರವೃತ್ತಿಕಃ ಕದಾ ಸದಾಶಿವಂ ಭಜೆ II೧೨II

ಕದಾ ನಿಲಿಂಪನಿರ್ಝರೀನಿಕುಂಜಕೊಟರೆ ವಸನ್
ವಿಮುಕ್ತದುರ್ಮತಿಃ ಸದಾ ಶಿರಃ ಸ್ಥಮಂಜಲಿಂ ವಹನ್
ವಿಮುಕ್ತಲೋಲಲೋಚನೊ ಲಲಾಮಭಾಲಲಗ್ನಕಃ
ಶಿವೇತಿ ಮಂತ್ರಮುಚ್ಚರನ್ ಕದಾ ಸುಖೀ ಭವಾಮ್ಯಹಮ್ II೧೩II

ಇದಮ್ ಹಿ ನಿತ್ಯಮೇವಮುಕ್ತಮುತ್ತಮೋತ್ತಮಂ ಸ್ತವಂ
ಪಠನ್ ಸ್ಮರನ್ ಬ್ರುವನ್ನರೋ ವಿಶುದ್ಧಿಮೇತಿಸಂತತಮ್
ಹರೆ ಗುರೌ ಸುಭಕ್ತಿಮಾಶು ಯಾತಿ ನಾನ್ಯಥಾ ಗತಿಂ
ವಿಮೋಹನಂ ಹಿ ದೇಹಿನಾಂ ಸುಶಂಕರಸ್ಯ ಚಿಂತನಮ್ II೧೪II

ಪೂಜಾವಸಾನಸಮಯೆ ದಶವಕ್ತ್ರಗೀತಂ ಯಃ
ಶಂಭುಪೂಜನಪರಂ ಪಠತಿ ಪ್ರದೋಷೆ
ತಸ್ಯ ಸ್ಥಿರಾಂ ರಥಗಜೇಂದ್ರತುರಂಗಯುಕ್ತಾಂ
ಲಕ್ಷ್ಮೀಂ ಸದೈವ ಸುಮುಖಿಂ ಪ್ರದದಾತಿ ಶಂಭುಃ II
೧೫ II

IIಇತಿ ಶ್ರೀರಾವಣ ಕೃತಮ್ ಶಿವ ತಾಂಡವ ಸ್ತೋತ್ರಮ್ ಸಂಪೂರ್ಣಮ್II

Thursday, April 22, 2010

Sakala grahabala neene

ಸಕಲ ಗ್ರಹಬಲ ನೀನೆ ಸರರಿಜಾಕ್ಷ ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೆ

ರವಿಚಂದ್ರ ಬುಧ ನೀನೆ ರಾಹು ಕೇತುವು ನೀನೆ ಕವಿ ಗುರು ಶನಿಯು ಮಂಗಳನು ನೀನೆ

ದಿವ ರಾತ್ರಿಯಲಿ ನೀನೆ ನವ ವಿಧಾನವು ಭವರೋಗ ಹರ ನೀನೆ ಬೇ ಷಜನು ನೀನೆ

ಪಕ್ಷಮಾಸವು ನೀನೆ ಪರ್ವ ಕಾಲವು ನೀನೆ ನಕ್ಷತ್ರ ಯೋಗ ತಿಥಿ ಕರಣ ನೀನೆ

ಅಕ್ಷಯವಾಗಿ ದ್ರೌಪದಿಯ ಮಾನವಕಾಯ್ದ ಪಕ್ಷಿವಾಹನ ನೀನೆ ರಕ್ಷಕನು ನೀನೆ

ಋತುವತ್ಸರವು ನೀನೆ ಪ್ರತ ಯುಗಾಡಿಯು ನೀನೆ ಕ್ರತು ಹೋಮ ಯಜ್ಞ ಸದ್ಗತಿಯು ನೀನೆ

ಜಿತವಾಗಿ ಎನ್ನೊಡೆಯ ಪುರಂದರವಿಠಲ ಶ್ರುತಿಗೆ ಸಿಲುಕದ ಮಹಾ ಮಹಿಮಾ ನೀನೆ