ಬಾರೆ ಭಾಗ್ಯದ ನಿಧಿಯೇ
ಕರವೀರ ನಿವಾಸಿನಿ ಸಿರಿಯೇ
ಬಾರೆ ಬಾರೆ ಕರವೀರ ನಿವಾಸಿನಿ
ಬಾರೆ ಬಾರೆಗು ಶುಭ ತೋರೆ ನಮ್ಮನಿಗೆ
ನಿಗಮವೆದ್ಯಳೆ ನೀನು ನಿನ್ನ
ಪೋಗಳಲಾಪೇನೆ ನಾನು
ಮಗನಪರಾಧವ ತೆಗೆದೇಣಿಸದಲೇ
ನ್ನಗವೆಣಿಯೆ ಲಗಬಗೆಯಿ೦ದಲಿ
ಲೋಕಮಾತೆಯೇ ನೀನು ನಿನ್ನ
ತೋಕನಲ್ಲವೇ ನಾನು
ಆಕಳು ಕರುವಿನ ಸ್ವೀಕರಿಸುವ ಪರಿ
ನೀ ಕರುಣದಿ ಕಾಲ್ಹಾಕು ನಮ್ಮನಿಗೆ
ಕಡೆಗೆ ನಮ್ಮನಿವಾಸ ಒಡೆಯನ೦ತಾದ್ರಿಶ
ಒಡೆಯನಿದ್ದಲ್ಲಿಗೆ ಮಡದಿ ಬಾಹುವುದು
ರೂಡಿಗುಚಿತವಿದು ನಡಿ ನಮ್ಮನಿಗೆ
Audio Link:
Sunday, December 27, 2009
Haridina paatakaparihaara divijara
ಹರಿದಿನ ಪಾತಕಪರಿಹಾರ ದಿವಿಜರ
ಕರುಣಕ್ಕೆ ಕಾರಣ ನ೦ಬೆಲೊ ಮನುಜ IIಪII
ಗಂಗೆ ಮೊದಲಾದ ತೀರ್ಥ೦ಗಳೇಣೆಯೇ ಶ್ರೀರಂಗ ಮೋದಲಾದ ಕ್ಷೇತ್ರವು ಸರಿಯೇ
ಉತ್ತು೦ಗ ಜಪತಪ ಹೋಮಗಳೆದುರೆ ಶ್ರೀರಂಗನಾಥನ ದಿನಕೋ೦ದುಪವಾಸಕೆ II೧II
ಹಿಂದೆ ಮಾಡಿದ ಪಾಪ ಪರಿಹಾರವು , ನೀನಿಂದು ಮಾಡುವ ಸುಕೃತ ಬೆಳೆಸು
ಮು೦ದಣ ಮುಕುತಿಗೆ ಕಲ್ಪಲತಾ೦ಕುರ ಇಂದಿರೇಶನ ದಿನಕೋ೦ದುಪವಾಸಕೆ II೨II
ರುಕುಮಾ೦ಗದ ಮೊದಲಾದ ಭಕುತರೆ ಸಕಲವ ಬಿಟ್ಟು ಏಕಾದಶಿವ್ರತವ
ಭಕುತಿಯಿ೦ ಕೂಡಿ ಶ್ರೀ ಕೃಷ್ಣ ನ ಮೆಚ್ಚಿಸಿ - ಮುಕುತಿ ಸೂರೆಗೂ೦ದರೆ೦ಬುದನರಿಯೇ II೩II
ಕರುಣಕ್ಕೆ ಕಾರಣ ನ೦ಬೆಲೊ ಮನುಜ IIಪII
ಗಂಗೆ ಮೊದಲಾದ ತೀರ್ಥ೦ಗಳೇಣೆಯೇ ಶ್ರೀರಂಗ ಮೋದಲಾದ ಕ್ಷೇತ್ರವು ಸರಿಯೇ
ಉತ್ತು೦ಗ ಜಪತಪ ಹೋಮಗಳೆದುರೆ ಶ್ರೀರಂಗನಾಥನ ದಿನಕೋ೦ದುಪವಾಸಕೆ II೧II
ಹಿಂದೆ ಮಾಡಿದ ಪಾಪ ಪರಿಹಾರವು , ನೀನಿಂದು ಮಾಡುವ ಸುಕೃತ ಬೆಳೆಸು
ಮು೦ದಣ ಮುಕುತಿಗೆ ಕಲ್ಪಲತಾ೦ಕುರ ಇಂದಿರೇಶನ ದಿನಕೋ೦ದುಪವಾಸಕೆ II೨II
ರುಕುಮಾ೦ಗದ ಮೊದಲಾದ ಭಕುತರೆ ಸಕಲವ ಬಿಟ್ಟು ಏಕಾದಶಿವ್ರತವ
ಭಕುತಿಯಿ೦ ಕೂಡಿ ಶ್ರೀ ಕೃಷ್ಣ ನ ಮೆಚ್ಚಿಸಿ - ಮುಕುತಿ ಸೂರೆಗೂ೦ದರೆ೦ಬುದನರಿಯೇ II೩II
Saturday, December 5, 2009
kallu sakkare Kolliroo
ಕಲ್ಲು ಸಕ್ಕರೆ ಕೊಳ್ಳಿರೂ ನೀವೆಲ್ಲರೂ
ಕಲ್ಲು ಸಕ್ಕರೆ ಕೊಳ್ಳಿರೂ
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು
ಪುಲ್ಲ ಲೋಚನ ಶ್ರೀಕೃಷ್ಣನಾಮವೆಂಬ
ಎತ್ತು ಹೇರುಗಳಿಂದ ಹೊತ್ತು ಮಾರುವದಲ್ಲ
ಒತ್ಯೋತ್ತಿ ಗೋಣಿ ಯೋಳ್ತುತು೦ಬುವದಲ್ಲ
ಎತ್ತ ಹೋದರು ಬಾಡಿಗೆ ಸು೦ಕವಿದಕೀಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ II೧II
ನಷ್ಟ ಬಿಳುವದಲ್ಲ ನಾತ ಹುಟ್ಟುವದಲ್ಲ
ಎಷ್ಟು ಒಯ್ದರು ಬೆಲೆ ರೋಕ್ಕವಿದಕೀಲ್ಲ
ಕಟ್ಟಿರುವೆಯು ತಿಂದು ಕಡಿಮೆಯಾಗುವದಲ್ಲ
ಪಟ್ಟಣದೊಳಗೆ ಪ್ರಸಿದ್ಧ ವಾಗಿರುವಂಥ II೨II
ಸಂತೆ ಸಂತೆಗೆ ಹೋಗಿ ಶ್ರಮಪಡಿಸುವದಲ್ಲ
ಸಂತೆಯೊಳಗೆ ಇಟ್ಟು ಮಾರುವದಲ್ಲ
ಸಂತತ ಸಂತರ ನಾಲಿಗೆ ಸವಿ ಗೋ೦ಮಬ
ಕಾಂತ ಪುರಂದರ ವಿಠಲನ ನಾಮವೆಂಬ II3II
Friday, December 4, 2009
Vyartha vallave januma
ವ್ಯರ್ಥ ವಲ್ಲವೇ ಜನುಮ ವ್ಯರ್ಥ ವಲ್ಲವೇ
ಅಥಿ೯ಯಿಂದ ಹರಿಯ ನಾಮ ನಿತ್ಯ ಸ್ಮರಿಸದವರ ಜನ್ಮ
ಹರಿಯ ಸೇವೆ ಮಾಡದವನ ಹರಿಯ ಗುಣಗಳ ಎಣಿಸದವನ
ಹರಿಯ ಕೋ೦ಡಾಡದವನ ಹರಿಯ ತಿಳಿಯದವನ ಜನ್ಮ
ದಾಸರೊಡನೆ ಆಡದವನ ದಾಸರ ಪಾಡದವನ
ದಾಸರ ಕೊಂದಾಡದೆ ಹರಿಯ ದಾಸನಾಗದವನ ಜನ್ಮ
ಒಂದು ಶಂಖ ಉದಕ ತಂದು ಚಂದದಿ ಹರಿಗಪಿ೯ಸಿ
ತಂದೆ ಪುರಂದರ ವಿಠಲನ ಪೊಂದಿ ನೆನೆಯದವನ ಜನ್ಮ
ಅಥಿ೯ಯಿಂದ ಹರಿಯ ನಾಮ ನಿತ್ಯ ಸ್ಮರಿಸದವರ ಜನ್ಮ
ಹರಿಯ ಸೇವೆ ಮಾಡದವನ ಹರಿಯ ಗುಣಗಳ ಎಣಿಸದವನ
ಹರಿಯ ಕೋ೦ಡಾಡದವನ ಹರಿಯ ತಿಳಿಯದವನ ಜನ್ಮ
ದಾಸರೊಡನೆ ಆಡದವನ ದಾಸರ ಪಾಡದವನ
ದಾಸರ ಕೊಂದಾಡದೆ ಹರಿಯ ದಾಸನಾಗದವನ ಜನ್ಮ
ಒಂದು ಶಂಖ ಉದಕ ತಂದು ಚಂದದಿ ಹರಿಗಪಿ೯ಸಿ
ತಂದೆ ಪುರಂದರ ವಿಠಲನ ಪೊಂದಿ ನೆನೆಯದವನ ಜನ್ಮ
Elli Harikathaprasangavoo
ಎಲ್ಲಿ ಹರಿಕಥಾ ಪ್ರಸಂಗವೂ ಅಲ್ಲಿ ಗಂಗಾ ಯಮುನಾ ಗೋದಾ ಸಿಂಧು ಸರಸ್ವತಿ
ಎಲ್ಲಾ ತೀರ್ಥಗಳು ಬಂದು ಎಣೆಯಾಗಿ ನಿಲ್ಲುವವು
ವಲ್ಲಭ ಶ್ರೀ ಪುರಂದರವಿಠಲನು ( ಶ್ರೀಹರಿಯು ) ಮೆಚ್ಚುವನು
ಜಯ ಹರಿ ಎಂಬುವುದೇ ಸುದಿನವು
ಜಯ ಹರಿ ತಾರ ಬಲವೂ
ಜಯ ಹರಿ ಚಂದ್ರ ಬಲವೂ
ಜಯ ಹರಿ ವಿದ್ಯಾ ಬಲವೂ
ಜಯ ಹರಿ ದೈವ ಬಲವೂ
ಜಯ ಹರಿ ನಮ್ಮ ಪುರಂದರ ವಿಠಲನ ಬಲ್ಲವಯ್ಯ ಸಕಲ ಸಜ್ಜನರಿಗೆ
ಎಲ್ಲಾ ತೀರ್ಥಗಳು ಬಂದು ಎಣೆಯಾಗಿ ನಿಲ್ಲುವವು
ವಲ್ಲಭ ಶ್ರೀ ಪುರಂದರವಿಠಲನು ( ಶ್ರೀಹರಿಯು ) ಮೆಚ್ಚುವನು
ಜಯ ಹರಿ ಎಂಬುವುದೇ ಸುದಿನವು
ಜಯ ಹರಿ ತಾರ ಬಲವೂ
ಜಯ ಹರಿ ಚಂದ್ರ ಬಲವೂ
ಜಯ ಹರಿ ವಿದ್ಯಾ ಬಲವೂ
ಜಯ ಹರಿ ದೈವ ಬಲವೂ
ಜಯ ಹರಿ ನಮ್ಮ ಪುರಂದರ ವಿಠಲನ ಬಲ್ಲವಯ್ಯ ಸಕಲ ಸಜ್ಜನರಿಗೆ
Tuesday, November 24, 2009
BRamhandadolu
ಬ್ರಹ್ಮಾಂಡದೊಳಗೆ ಅರಸಿ ನೋಡಲು ನಮ್ಮೂರೇ ವಾಸಿ
ರಮ್ಮೆಯರಸನು ಸರ್ವದ ವಾಸಿಪ ಸುಮ್ಮಾನದಿ ತಾನು
ಜನನ ಮರಣವಿಲ್ಲ ಅಲ್ಲಿ ಉಣುವ ದುಃಖವಿಲ್ಲ
ಅನುಜ ತನುಜರು ಅಲ್ಲಿಲ್ಲ ಅನುಮಾನದ ಸೊಲ್ಲೇ ಇಲ್ಲ
ನಿದ್ರೆಯು ಅಲ್ಲಿಲ್ಲ ರೋಗೋ ಪದ್ರಗಳಲ್ಲಿಲ್ಲ
ಕ್ಷುದ್ರಜನಂಗಳು ಅಲ್ಲಿಲ್ಲ ಸಮುದ್ರಶಯನ ಬಲ್ಲ ಎಲ್ಲ
ಸಾಧುಜನರ ಕೂಡೆ ಮೋಕ್ಷಕೆ ಸಾಧನೆಗಳ ಮಾಡೆ
ಮಾಧವ ಪುರಂದರವಿಠಲರಾಯನು ಆದರಿಸುವನಲ್ಲೆ ಬಲ್ಲೆ
ರಮ್ಮೆಯರಸನು ಸರ್ವದ ವಾಸಿಪ ಸುಮ್ಮಾನದಿ ತಾನು
ಜನನ ಮರಣವಿಲ್ಲ ಅಲ್ಲಿ ಉಣುವ ದುಃಖವಿಲ್ಲ
ಅನುಜ ತನುಜರು ಅಲ್ಲಿಲ್ಲ ಅನುಮಾನದ ಸೊಲ್ಲೇ ಇಲ್ಲ
ನಿದ್ರೆಯು ಅಲ್ಲಿಲ್ಲ ರೋಗೋ ಪದ್ರಗಳಲ್ಲಿಲ್ಲ
ಕ್ಷುದ್ರಜನಂಗಳು ಅಲ್ಲಿಲ್ಲ ಸಮುದ್ರಶಯನ ಬಲ್ಲ ಎಲ್ಲ
ಸಾಧುಜನರ ಕೂಡೆ ಮೋಕ್ಷಕೆ ಸಾಧನೆಗಳ ಮಾಡೆ
ಮಾಧವ ಪುರಂದರವಿಠಲರಾಯನು ಆದರಿಸುವನಲ್ಲೆ ಬಲ್ಲೆ
Sunday, November 22, 2009
Teeliso Ella
ತೇಲಿಸೋ ಇಲ್ಲ ಮೂಳುಗಿಸೂ
ನಿನ್ನ ಕಾಲಿಗೆ ಬಿದ್ದೇನೂ ಪರಮಕೃಪಾಳೂ
ಸತಿಸುತ ಧನದಾಸೇ ಎ೦ದೆ೦ಬ ಮೋಹದಿ
ಹಿತದಿ೦ದ ಅತಿನೋ೦ದು ಬೇ೦ಡಾದೆನೋ
ಗತಿ ಕೂಡುವರ ಕಾಣೆ ಮತಿಯ ಪಾಲಿಸೂ ಲಕ್ಷ್ಮಿ
ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ II೧II
ಜರೆರೋಗ ದಾರಿದ್ರ್ಯ ಕಲ್ಮಶವೆ೦ಬ
ಶರಧಿಯೂಳಗೆ ಬಿದ್ದು ಮುಳುಗಿದೇನೂ
ಸ್ಥಿರವಲ್ಲ ದೇಹವು ನೆರೆ ನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೂ ಹರಿಯೇ II೨ II
ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸ ಹೂದೇನೂ ಭಕ್ತಿರಸವ ಬಿಟ್ಟು
ಶೇಷಶಯನ ಶ್ರೀ ಪುರಂದರವಿಠಲನೆ
ದಾಸರ ಸ೦ಗವಿತ್ತು ಪಾಲಿಸೂ ಹರಿಯೇ II೩II
ನಿನ್ನ ಕಾಲಿಗೆ ಬಿದ್ದೇನೂ ಪರಮಕೃಪಾಳೂ
ಸತಿಸುತ ಧನದಾಸೇ ಎ೦ದೆ೦ಬ ಮೋಹದಿ
ಹಿತದಿ೦ದ ಅತಿನೋ೦ದು ಬೇ೦ಡಾದೆನೋ
ಗತಿ ಕೂಡುವರ ಕಾಣೆ ಮತಿಯ ಪಾಲಿಸೂ ಲಕ್ಷ್ಮಿ
ಪತಿ ನಿನ್ನ ಚರಣದ ಸ್ಮರಣೆಯಿತ್ತೆನಗೆ II೧II
ಜರೆರೋಗ ದಾರಿದ್ರ್ಯ ಕಲ್ಮಶವೆ೦ಬ
ಶರಧಿಯೂಳಗೆ ಬಿದ್ದು ಮುಳುಗಿದೇನೂ
ಸ್ಥಿರವಲ್ಲ ದೇಹವು ನೆರೆ ನಂಬಿದೆ ನಿನ್ನ
ಕರುಣಾಭಯವಿತ್ತು ಪಾಲಿಸೂ ಹರಿಯೇ II೨ II
ದೋಷವುಳ್ಳವ ನಾನು ಭಾಷೆಯುಳ್ಳವ ನೀನು
ಮೋಸ ಹೂದೇನೂ ಭಕ್ತಿರಸವ ಬಿಟ್ಟು
ಶೇಷಶಯನ ಶ್ರೀ ಪುರಂದರವಿಠಲನೆ
ದಾಸರ ಸ೦ಗವಿತ್ತು ಪಾಲಿಸೂ ಹರಿಯೇ II೩II
Daari yavudayya vaikunthake
ದಾರಿಯಾವುದಯ್ಯ ವೈಕು೦ಠಕೆ ದಾರಿ ತೂರಿಸಯ್ಯ
ಅಧರ ಮೂರುತಿ ನಿನ್ನ ಪಾದ ಸೇರುವುದಕ್ಕೆ ದಾರಿಯಾವುದಯ್ಯ
ಅನುಭವದ ಅನುಭವದಿ ಕತ್ತಲೆಯೂಳು ಬಲು ಅ೦ಜುವೆ ನಡುಗಿ
ಬಳಲುತ್ತ ತಿರುಗಿದೆ ಹಾದಿಯ ಕಾಣದೆ ಹೋಳೆವ೦ತ ದಾರಿಯ ತೋರೋ ನಾರಾಯಣ
ಪಾಪ ಪೋವ೯ದಲ್ಲಿ ಮಾಡಿದುದಕ್ಕೆ ಲೇಪವಾಗಿದೆ ಕಮ೯
ಈ ಪರಿಯಿ೦ದಲಿ ನಿನ್ನ ನೇನೇಸಿ ಕೋ೦ಬೆ ಶ್ರೀ ಪತಿ ಸಲಹೆನ್ನ ಧೂಪನಾರಾಯಣ
ಇನ್ನು ನಾ ಜನಿಸಲಾರೆ ಭೂಮಿಯಮೇಲೇ ನಿನ್ನ ದಾಸಾನಾದೇನೂ
ಪನ್ನಗಶಯನ ಶ್ರೀ ಪುರ೦ದರವಿಠಲ ಇನ್ನು ಪುಟ್ಟಿಸದಿರು ಎನ್ನ ನಾರಾಯಣ
ಅಧರ ಮೂರುತಿ ನಿನ್ನ ಪಾದ ಸೇರುವುದಕ್ಕೆ ದಾರಿಯಾವುದಯ್ಯ
ಅನುಭವದ ಅನುಭವದಿ ಕತ್ತಲೆಯೂಳು ಬಲು ಅ೦ಜುವೆ ನಡುಗಿ
ಬಳಲುತ್ತ ತಿರುಗಿದೆ ಹಾದಿಯ ಕಾಣದೆ ಹೋಳೆವ೦ತ ದಾರಿಯ ತೋರೋ ನಾರಾಯಣ
ಪಾಪ ಪೋವ೯ದಲ್ಲಿ ಮಾಡಿದುದಕ್ಕೆ ಲೇಪವಾಗಿದೆ ಕಮ೯
ಈ ಪರಿಯಿ೦ದಲಿ ನಿನ್ನ ನೇನೇಸಿ ಕೋ೦ಬೆ ಶ್ರೀ ಪತಿ ಸಲಹೆನ್ನ ಧೂಪನಾರಾಯಣ
ಇನ್ನು ನಾ ಜನಿಸಲಾರೆ ಭೂಮಿಯಮೇಲೇ ನಿನ್ನ ದಾಸಾನಾದೇನೂ
ಪನ್ನಗಶಯನ ಶ್ರೀ ಪುರ೦ದರವಿಠಲ ಇನ್ನು ಪುಟ್ಟಿಸದಿರು ಎನ್ನ ನಾರಾಯಣ
Subscribe to:
Posts (Atom)