Sunday, August 2, 2009

ಈಶ ನಿನ್ನ ಚರಣ ಭಜನೆ /Eeesha ninna charana Bhajane

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು
ದೋಷರಾಶಿ ನಾಶ ಮಾಡೋ ಶ್ರೀಶ ಕೇಶವ IIಪII

ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ II1 II

ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನ ಬಾಧೆ ಬಿಡಿಸು ಮಾಧವII ೨II


ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ II೩II


ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ II೪ II


ಮೊದಲು ನಿನ್ನ ಪಾದ ಪೂಜೆ ಮುದದಿ ಮಾಡುವೆನೈ ನಾನು
ಹೃದಯದೊಳಗೆ ಹುದುಗಿಸಯ್ಯ ಮಧುಸೂಧನII ೫II

ಕವಿದುಕೊಂಡು ಇರುವ ಪಾಪ ಸವೆದು ಪೋಗುವಂತೆಮಾಡು
ಜವನ ಬಾಧೆಯನು ಬಿಡಿಸೋ ತ್ರಿವಿಕ್ರಮ II೬ II


ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥೆ
ನೆಮವೇನಗೆ ಪಾಲಿಸಯ್ಯ ಸ್ವಾಮಿ ವಾಮನ II೭II


ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ಒದಗುವಂತೆ
ಹೃದಯದಲ್ಲಿ ಸದನ ಮಾಡೋ ಮುದದಿ ಶ್ರೀಧರ II೮II



ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು

ಹುಸಿಗೆ ನೀನು ಹಾಕದಿರೋ ಹೃಷಿಕೇಶನೆ II೯ II



ಆಬ್ದೀಯೊಳಗೆ ಬಿದ್ದು ನಾನು ಒದ್ದು ಕೊಂಬೆನಯ್ಯ ಭವದಿ

ಗೆದ್ದು ಪೋಪ ಬುದ್ಧಿ ತೋರೋ ಪದ್ಮನಭಾನೆII ೧೦II



ಕಾಮ ಕ್ರೋಧ ಬಿಡಿಸಿ ನಿನ್ನ ನಾಮ ಜಿವ್ಹೆಯೊಳಗೆ ನುಡಿಸಿ

ಶ್ರೀ ಮಹಾನುಭಾವನಾದ ದಾಮೋದರ II೧೧ II



ಪಂಕಜಕ್ಷಾ ನೀನೆ ಎನ್ನ ಮಂಕು ಬುದ್ಧಿಯನ್ನು ಬಿಡಿಸಿ ನಿನ್ನ

ಕಿಂಕರನ ಮಾಡಿಕೊಳ್ಳೋ ಸಂಕರುಷಣ II೧೨II



ಏಸುಜನ್ಮ ಬಂದರೇನು ದಾಸನಗಲಿಲ್ಲ ನಾನು

ಗಾಸಿಮಾದದಿರೋ ಇನ್ನು ವಾಸುದೇವನೆ II೧೩II



ಬುದ್ಧಿಶೂನ್ಯನಾಗಿ ನಾನು ಕದ್ದುಕಳ್ಳನಾದೆ ಎನ್ನ

ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮನಾನೆ II೧೪ II



ಜನನಿ ಜನಕ ನಿನ್ನೆಯೆಂದು ಎನುವೆನಯ್ಯ ದಿನಬಂದು

ಎನಗೆ ಮುಕ್ತಿ ಪಾಲಿಸಿಂದು ಅನಿರುದ್ದನೆ II೧೫II



ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡೋ ಪ್ರೇಮ

ಇರಿಸು ನಿನ್ನ ಚರಣದಲ್ಲಿ ಪುರುಷೋತ್ತಮ II೧೬II



ಸಾಧುಸಂಗ ಕೊಟ್ಟು ನಿನ್ನ ಪಾದ ಭಜಕನೆನಿಸು ಎನ್ನ

ಭೇದ ಮಾಡಿ ನೋಡದಿರೋ ಅಧೋಕ್ಷದ II೧೭ II



ಚಾರುಚರಣ ತೋರಿ ಎನಗೆ ಪಾರಗಾಣಿಸಯ್ಯ ಕೊನೆಗೆ

ಭಾರ ಹಾಕಿರುವೆ ನಿನಗೆ ನಾರಸಿಂಹನೆ II೧೮ II



ಸಂಚಿತಾರ್ಥ ಪಾಪಗಳನು ಕಿಂಚಿತಾದರಿಲ್ಲದಂತೆ

ಮುಂಚಿತಾಗಿ ಕಳೆಯಬೇಕು ಸ್ವಾಮಿ ಅಚ್ಯುತ್II ೧೯II



ಜ್ಞಾನ ಭಕುತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನ

ಹೀನ ಬುದ್ಧಿ ಬಿಡಿಸೋ ಮುನ್ನ ಜನಾರ್ಧನ II೨೦ II



ಜಪತಪಾನುಷಾಠ ನೀನು ವಪ್ಪುವಂತೆ ಮಾಡಲಿಲ್ಲ

ತಪ್ಪು ಕೋಟಿ ಕ್ಷಮಿಸಬೇಕು ಉಪೇಂದ್ರನೆ II೨೧II



ಮೋರೆಯ ಇಡುವೆನಯ್ಯ ನಿನಗೆ ಸೆರೆಯ ಬಿಡಿಸು ಭಾವದ ಎನಗೆ

ಇರಿಸು ಭಕ್ತರೊಳಗೆ ಪರಮ ಪುರುಷ ಶ್ರೀಹರಿII ೨೨II



ಪುಟ್ಟಿಸಬೇಡವೆನು ಪುಟ್ಟಿಸಿದಕೆ ಪಾಲಿಸೇನು

ಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣ II೨೩II



ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವನ

ಅಥಿ೯ಯಿಂದ ಸಲಹುವನು ಕೃತ೯ ಕೇಶವ II೨೪II



ಮರೆತುಬಿಡದೆ ಹರಿಯನಾಮ ಬರೆದು ಓದಿ ಕೇಳಿದವರಿಗೆ

ಕರೆದು ಮುಕ್ತಿ ಕೊಡುವ ಬಾಡದಾದಿಕೇಶವ II೨೫ II

Wednesday, July 29, 2009

HANUMAN STOTRA / भीमरूपी महारुद्र






भीमरूपी स्तोत्र
भीमरूपी महारुद्रा वज्र हनुमान मारुती वनारी अन्जनीसूता रामदूता प्रभंजना १
महाबळी प्राणदाता सकळां उठवी बळें सौख्यकारी दुःखहारी (शोकहर्ता) (धूर्त) दूत वैष्णव गायका २
दीननाथा हरीरूपा सुंदरा जगदंतरा पातालदेवताहंता भव्यसिंदूरलेपना ३
लोकनाथा जगन्नाथा प्राणनाथा पुरातना पुण्यवंता पुण्यशीला पावना परितोषका ४
ध्वजांगें उचली बाहो आवेशें लोटला पुढें काळाग्नि काळरुद्राग्नि देखतां कांपती भयें ५
ब्रह्मांडें माइलीं नेणों आंवाळे दंतपंगती नेत्राग्नी चालिल्या ज्वाळा भ्रुकुटी ताठिल्या बळें ६
पुच्छ तें मुरडिलें माथां किरीटी कुंडलें बरीं सुवर्ण कटि कांसोटी घंटा किंकिणि नागरा ७
ठकारे पर्वता ऐसा नेटका सडपातळू चपळांग पाहतां मोठें महाविद्युल्लतेपरी ८
कोटिच्या कोटि उड्डाणें झेंपावे उत्तरेकडे मंदाद्रीसारखा द्रोणू क्रोधें उत्पाटिला बळें ९
आणिला मागुतीं नेला आला गेला मनोगती मनासी टाकिलें मागें गतीसी तूळणा नसे १०
अणूपासोनि ब्रह्मांडाएवढा होत जातसे तयासी तुळणा कोठें मेरु- मांदार धाकुटे ११
ब्रह्मांडाभोंवते वेढे वज्रपुच्छें करूं शके तयासी तुळणा कैंची ब्रह्मांडीं पाहतां नसे १२
आरक्त देखिले डोळां ग्रासिलें सूर्यमंडळा वाढतां वाढतां वाढे भेदिलें शून्यमंडळा १३
धनधान्य पशुवृद्धि पुत्रपौत्र समग्रही (समस्तही)पावती रूपविद्यादि स्तोत्रपाठें करूनियां १४
भूतप्रेतसमंधादि रोगव्याधि समस्तही नासती तुटती चिंता आनंदे भीमदर्शनें १५
हे धरा पंधराश्लोकी लाभली शोभली भली (बरी).दृढदेहो निःसंदेहो संख्या चंद्रकला गुणें १६
रामदासीं अग्रगण्यू कपिकुळासि मंडणू रामरूपी अन्तरात्मा दर्शने दोष नासती १७
इति श्री रामदासकृतं संकटनिरसनं नाम
श्री मारुतिस्तोत्रम् संपूर्णं


Audio Link:
http://www.youtube.com/watch?v=c8aZ2xmNngU

Tuesday, July 28, 2009

Vijaya vitthala Radio

Vijaya Vitthala Radio is a internet 24*7 Radio.
Here is the Link:http://www.madhwa-pravachana.org/vijayavittalaradio.htm

Mangalam jaya mangalam /ಮಂಗಳಂ ಜಯ ಮಂಗಳಂ

ಮಂಗಳಂ ಜಯ ಮಂಗಳಂ ವರ ವೈಕುಂಠದಿ ಬಂದವಗೆ IIಪII

ವರಗಿರಿಯಲಿ ಸಂಚರಿಸುವಗೆ ವರಹ ದೇವನನು
ಸ್ಮರಿಸಿ ಸ್ವಾಮಿ ಪುಷ್ಕರಣಿ ತೀರದಲ್ಲಿರುವವಗೆ II೧ II

ಸರಸದಿ ಬೇಟಿಗೆ ಹೊರಟವಗೆ ಸರಸಿಜಾಕ್ಷಳ ಕಂಡವಗೆ
ಮೂರುಳಾಟದಿ ತಾ ಪರವಶನಾಗುತ ಕೊರವಿ ವೇಷವ ಧರಿಸಿರುವವಗೆII ೨II

ಗಗನರಾಜಪುರಕೊಹೋದವಗೆ ಬಗೆ ಬಗೆ ನುಡಿಗಳ ನುಡಿದವಗೆ
ಆಗವಾಗಿಗೆ ನಿನ್ನ ಮಗಳ ಕೊದುಯೆಂದು ಗಗನ ರಾಜನ ಸತಿಗೆಹೆಲ್ದಾವಗೆ II೩ II

ತನ್ನ ಕಾರ್ಯ ತಾ ಮಾಡಿದವಗೆ ಇನ್ನೊಬ್ಬರ ಹೆಸಹೇ೯ಳಿರುವಗೆ
ಮುನ್ನ ಮಾಡುವೆ ನಿಶ್ಚಯ ವಾಗಿರಲು ತನ್ನ ಬಳಗ ಕರಿಸುವವಗೆ II೪ II

ಎತ್ತಿ ನಿಬ್ಬಣ ಹೊರವಗೆ ನಿತ್ಯ ತ್ರುಪ್ತನಾಗಿರುವವಗೆ
ಉತ್ತರಾಣಿಯ ವಾಗರವನುಂಡು ತೃಪ್ತನಾಗಿ ತಂಗಿರುವವಗೆ II೫ II

ವದಗಿ ಮುಹುತ೯ಕೆ ಬಂದವಗೆ ಸದಯಿನಾಗಿರುವವಗೆ
ಮುದದಿಂದ ಶ್ರೀ ಪದಮಾವತಿಯಳ ಮಾಡುವೆ ಮಾಡಿಕೊಂಡ ವಧುವರಗೆII ೬II

ಕಾಂತೆಯಿಂದ ಸಹಿತಾದವಗೆ ಸಂತೋಷದಿ ಕುಲಿತಿರುವವಗೆ
ಸಂತತ ಶ್ರೀ ಮದನ೦ತಾದ್ರಿಶಗೆ ಶಾಂತಿ ಮೂರುತಿ ಸರ್ವೋತ್ತ್ಮಗೆ II೭II

Mangala gowri song / ಮಂಗಳ ಗೌರಿ ಹಾಡು

Mangala gowri vrata or pooja is performed By newly married women for the first five years and fifth year pooja is concluded by udhyapana.Mangala gowri pooja is dedicated to gowri devi who is known as parvathi devi. Mangala gowri devi pooja is performed on shravana tuesdays.

Mangala Gouri Vrat is observed by married women for the good health and long life of the husaband. There is a popular belief that performing Shravana Mangala Gauri vrata or worshipping Mangala Gowri on Shravan Mangalwar gives a woman a prosperous married life and happiness in every aspect of her life. They will be blessed with wealth and good children
Mangala gowri song:

click the picasa link : http://picasaweb.google.com/shreerayaru/MANGALAGOWRIHAADU
( click on each part and click on the enlarge button on the right side top to view in larger font)

Wednesday, July 15, 2009

ರಾಘವೇಂದ್ರ ಗುರುರಾಯರ ಸೇವಿಸಿರೋ/ Raghavendra gururayara sevisiro

ರಾಘವೇಂದ್ರ ಗುರುರಾಯರ ಸೇವಿಸಿರೋ
ಸೌಖ್ಯದಿ ಜೀವಿಸಿರೋ
ತುಂಗಾತಿರದಿ ರಘುರಾಮರ ಪೂಜಿಪರೋ
ನರಸಿಂಗನ ಭಜಕರೋ


ಶ್ರೀ ಸುಧೀಂದ್ರ ಕರ ಸರೋಜ ಸಂಜಾತ
ಜಗದೊಳಗೆ ಪುನೀತ
ದಾಶರಥಿಯ ದಾಸತ್ವವ ತಾನ್ವಹಿಸಿ
ದುಮ೯ತಗಳ ಜಯಿಸಿ


ಈ ಸಮೀರ ಮತದ ಸಂಸ್ಥಾಪಕರಾಗಿ
ನಿಂದಕರನು ನೀಗಿ
ಭೂಸುರರಿಗೆ ಸಂಸೆವ್ಯ ಸದಾಚರಣಿ
ಕಂಗೊಳಿಸುವ ಕರುಣಿ


ಕುಂದದೆ ವರ ಮಂತ್ರಾಲಯದಲ್ಲಿರುವ
ಕರೆದಲ್ಲಿಗೆ ಬರುವ
ಬ್ರಂದಾವನಗತ ಮೈತ್ತಿಕೆ ಜಲಪಾನ
ಮುಕ್ತಿಗೆ ಸೋಪಾನ

ಸಂದರ್ಶನ ಮಾತ್ರದಲಿ ಮಹಾಪಾಪ
ಬಡಿದೊಡಿಸಲಾಪ
ಮಂದಭಾಗ್ಯರಿಗೆ ದೊರಕದಿವರ ಸೇವಾ
ಶರಣರ ಸಂಜೀವ

ಶ್ರೀಧರ ವಿಠಲನ ಸನ್ನಿಧಾನಪಾತ್ರ
ಸಂಸ್ತುತಿಸುವ ಮಾತ್ರ
ಮೋದಪಡಿಸುತಿಹ ತಾನಿಹಪರದಲ್ಲಿ
ಈತಗೆ ಸರಿಯೆಲ್ಲಿ

ಮೇದಿನಿಯೋಳಗಿನ್ನರಸರು ನಾ ಕಾಣೆ
ಪುಸಿಯೆಲ್ಲನ್ನಾಣೆ
ಪಾದಸ್ಮರಣೆಯ ಮಾಡದವನೆ ಪಾಪಿ
ನಾ ಪೇಳುವೆ ಸ್ಥಾಪಿ

Audio Link:
http://www.kannadaaudio.com/Songs/Devotional/ShreeRaghavendraSwamySuprabhata/RaghavendraGururayaraSevisiro.ram

Wednesday, July 8, 2009

ಪವಮಾನ ಪವಮಾನ ಜಗದ ಪ್ರಾಣ / Pavamana jagada prana



ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ
ಭವಭಯಾರಣ್ಯ ದಹನ

ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಜನ


ಹೇಮಕಚ್ಚುಟ ಉಪವೀತ ಧರಿಪ ಮಾರುತ
ಕಾಮಾದಿ ವರ್ಗರಹಿತ
ವ್ಯೂಮಾದಿ ಸರ್ವ ವ್ಯಾಪುತ ಸತತ ನಿರ್ಭೀತ
ರಾಮಚಂದ್ರನ ನಿಜ ದೂತ

ಯಾಮ ಯಾಮಕೆ ನಿನ್ನರಾಧಿಪುದಕೆ
ಕಾಮಿಪೆ ಯೇನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರಮತಿಯನು ನಿ ಮಾಣಿಪುದು

ವಜ್ರಶರೀರಗಂಭೀರ ಮುಕುಟಧರ
ದುರ್ಜನ ವನಕುಠಾರಾ
ನಿರ್ಜನ ಮಣಿ ದಯಾ ಪಾರಾವಾರ ಉದಾರ
ಸಜ್ಜನರಘಪರಿಹಾರ

ಅರ್ಜುನಗೊಲಿದಂದು ಧ್ವಜವಾನಿಸಿನಿಂದು
ಮೂಜ೯ಗವರಿವಂತೆ ಗರ್ಜನೆ ಮಾಡಿದೆ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜದಪಾದದ ಧೂಳಿ
ಮಾಜ೯ನದಲಿ ಭವವ೯ಜಿತನೆನಿಸಿಸೂ
ಪ್ರಾಣ ಅಪಾನವ್ಯಾನೋದಾನ ಸಮಾನಾ
ಆನಂದಭಾರತಿ ರಮಣಾ
ನೀನೇ ಶವಾ೯ದಿಗಿವಾ೯ಣಾದ್ಯರಿಗೆ
ಜ್ಞಾನಧನಪಾಲಿಪರೆಣ್ಯ

ನಾನು ನಿರುತದಲಿ ಏನೇನೆಸಗಿದೆ

ಮಾನಸಾದಿ ಕರ್ಮ ನಿನಗೋಪ್ಪಿಸಿದೇನೂ

ಪ್ರಾಣನಾಥ ಸಿರಿವಿಜಯ ವಿಠಲನ

ಕಾಣಿಸಿಕೊಡುವದು ಭಾನುಪ್ರಕಾಶ

Audio link:http://www.youtube.com/watch?v=6QLoQS2ljK8

ಘಟಿಕಾ ಚಲದಿ ನಿಂತ ಶ್ರೀ ಹನುಮಂತ /Ghatika chaladi ninta sri Hanumanta.

ಘಟಿಕಾ ಚಲದಿ ನಿಂತಾ ಶ್ರೀ ಹನುಮಂತಾ
ಘಟಿಕಾ ಚಲದಿ ನಿಂತಾ

ಘಟಿಕಾ ಚಲದಿ ನಿಂತಾ ಪಟು ಹನುಮಂತನು
ಪಠನೆಯ ಮಾಡಲುತ್ಕಟದಿ ಪೋರೆವೆನೆಂದು


ಚತುರಯಗದಿ ತಾನು ಮುಖ್ಯಪ್ರಾಣನು
ಚತುರಮುಖನಯ್ಯನ
ಚತುರ ಮೂರುತಿಗಳನು ಚತುರತನದಿ ಭಜಿಸಿ
ಚರುತ ಮೂರ್ಖನಾಗಿ ಜಗಕೆ ಚತುವಿ೯ದ ಫಲವಕೊಡುತ

ಸರಸಿಜಭವಗೋಸ್ಕರ ಕಲ್ಮಷದೂರ
ವರಚಕ್ರ ತೀರ್ಥಸರ
ಮೆರೆವಾಚಲದಿ ನಿತ್ಯ ನರಹರಿಗೆದುರಾಗಿ
ಸ್ಥಿರಯೋಗಸನದಿ ಕರೆದು ವರಗಳ ಕೊಡುತ

ಶಂಖಚಕ್ರವಧರಿಸಿ ಭಕ್ತರ ಮನ
ಪಂಕವ ಪರಿಹರಿಸಿ
ಪಂಕಜನಾಭ ಶ್ರೀ ಪುರಂದರವಿಠಲನ
ಬಿಂಕದ ಸೇವಕ ಸಂಕಟಕಳೆಯುತ