Wednesday, August 5, 2009

Ee pariya sobagaava Devarali /ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ

ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ IIಪII
ಗೋಪಿಜನಪ್ರಿಯ ಗೋಪಾಲಗಲ್ಲದೆ IIಅಪ II

ದೊರಯತನದಲಿ ನೋಡೆ ಧರಣಿ ದೇವಿಗೆ ರಮಣ
ಸಿರಿಯ ತನದಲಿ ನೋಡೆ ಶ್ರೀಕಾಂತನು
ಹಿರಿಯ ತನದಲಿ ನೋಡೆ ಸರಸಿಜೋದ್ಭವನಯ್ಯ
ಗುರುವುತನದಲಿ ನೋಡೆ ಜಗದಾದಿ ಗುರುವು II೧II

ಪಾವನತ್ವದಿ ನೋಡೆ ಅದುರು ಗಂಗಾಜನಕ
ದೇವತ್ವದಿ ನೋಡೆ ದಿವಿಜರೋಡೇಯ
ಲಾವಣ್ಯದಲಿ ನೋಡೆ ಲೋಕಮೋಹಕನಯ್ಯ
ಅವಧೈಯ೯ದಿ ನೋಡೆ ಅಸುರಾಂತಕ II೨ II

ಗಗನದಲಿ ಸಂಚರಿಪ ಗಗನ ದೇವನೆ ತುರಗ
ಜಗತಿಧರ ಶೇಷಪಯ೯೦ಕಶನ
ನಿಗಮಗೋಚರ ಪುರಂದರಗಲ್ಲದೆ
ಮಿಗಿಲಾದ ದೈವಗಳಿಗೆ ಭಾಗ್ಯವುಂಟೆ II೩ II





Sankalpa seva of Sri Raghavendra Swamy

SRI GURU RAJO VIJAYATE


Here is the Link of SANKALPA SEVA OF GURU RAGHAVENDRA SWAMY.
http://www.gururaghavendra1.org/~srsmutt/articles/sankalpa.htm
I thank srs mutt for providing such avaluable information about the Sri Guragala seva and also thanks to gururaghavendra1.org .

Dasara nindisa Beda /ದಾಸರ ನಿಂದಿಸ ಬೇಡ ಮನುಜ

ದಾಸರ ನಿಂದಿಸ ಬೇಡ ಮನುಜ
ಹರಿ ದಾಸರ ನಿಂದಿಸ ಬೇಡ IIಪII

ರಾಮನ ನಿಂದಿಸಿ ರಾವಣ
ಕೆಟ್ಟ ವಿಭೀಷಣಗಾಯಿತು ಪಟ್ಟ
ಭೂಮಿಯ ಲೋಭದಿ ಕೌರವ ಕೆಟ್ಟ
ಧರ್ಮಗೆ ರಾಜ್ಯವ ಬಿಟ್ಟ II೧II

ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆ
ಸುಡದಲೇ ಬಿಡುವದೇನಣ್ಣ
ಪೋಡವಿಯ ಜನರಿಗೆ ಬಡತನ ಬಂದರೆ
ಬಿರುನುಡಿ ಆಡದಿರಣ್ಣ II೨ II

ದೇವಕಿಯ ಸೇರೆಯನ್ನು ಬಿಡಿಸಿದ ದಾಸರು
ನರರೆನೈ ಈ ಜಗದೊಳು
ಭಾವಜನಯ್ಯ ಭಕುತರ ಸೇವಿಸೆ
ಪಾವನ ಮಾಡೋ ಪುರಂದರ ವಿಠಲ II೩II

Tuesday, August 4, 2009

Jagadoddrana /ಜಗದೋದ್ಧಾರನ ಆಡಿಸಿದಳೆಶೋದಾ

ಜಗದೋದ್ಧಾರನ ಆಡಿಸಿದಳೆಶೋದಾ
ಜಗದೋದ್ಧಾರನ IIಪII

ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದಾII ಅಪII

ನಿಗಮಕೆ ಸಿಲುಕದ ಅಗಣಿತ ಮಹಿಮನ ಮಹಿಮನ
ಮುಗುಗಳ ಮಣಿಕ್ಯನ ಆಡಿಸಿದಳೆಶೋದಾ II1II

ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ II೨ II

ಪರಮ ಪುರುಶನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದಾII ೩II



Yantrodharaka PranaDevara stotra /ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ


ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್

ಪೀನವೃತ್ತ ಮಹಾಬಾಹುಂ ಸರ್ವ ಶತೃ ನಿವಾರಣಂ II೧II

ನಾನಾರತ್ನ ಸಮಾಯುಕ್ತಂ ಕುಂಡಲಾದಿ ವಿರಾಜಿತಮ್

ಸರ್ವದಾಭೀಷ್ಠದಾತರಾಂ ಸತಾಂ ವೈ ಧೃಢಮಾವಹೇ II೨II

ವಾಸಿನಂ ಚಕ್ರ ತೀರ್ಥಸ್ಯ ದಕ್ಷಿಣಸ್ಥ ಗಿರೌಸದಾ

ತುಂಗಾಂಬೋಧಿ ತರಂಗಸ್ಯ ವಾತೇನ ಪರಿಶೋಭಿತೇ II೩II

ನಾನಾದೇಶಗತೈಃ ಸದ್ಭಿಃ ಸೇವ್ಯಮಾನಂ ನೃಪೋತ್ತಮೈಃ

ಧೂಪದೀಪಾದಿ ನೈವೇದೈಃ ಪಂಚಖಾದ್ಯೈಶ್ಚಶಕ್ತಿತಃ II೪II

ಭಜಾಮಿ ಶ್ರೀ ಹನೂಮತಂ ಹೇಮಕಾಂತಿ ಸಮಪ್ರಭಮ್

ವ್ಯಾಸತೀರ್ಥ ಯತೀಂದ್ರೇಣ ಪೂಜಿತಂ ಪ್ರಣಿಧಾನತಃ II೫II

ತ್ರಿವಾರಂ ಯಃ ಪಠೇನ್ನಿತ್ಯಂ ಸ್ತೋತ್ರಂ ಭಕ್ತ್ಯಾ ದ್ವಿಜೋತ್ತಮಃ

ವಾಂಛಿತಂ ಲಭತೇ ಭೀಷ್ಟಂ ಷಣ್ಮಾಸಾಭ್ಯಂತರೇ ಖಲು II೬II

ಪುತ್ರಾರ್ಥಿ ಲಭತೇ ಪುತ್ರಾನ್ ಯಶಾರ್ಥಿ ಲಭತೇ ಯಶಃ

ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಂ II೭II

ಸರ್ವಥಾ ಮಾಸ್ತು ಸಂದೇಹೋ ಹರಿಃ ಸಾಕ್ಷೀ ಜಗತ್ಪತಿಃ

ಯಃಕರೋತ್ಯತ್ರ ಸಂದೇಹಂ ಸಯಾತಿ ನರಕಂ ಧೃವಮ್II ೮II
Iಇತಿ ಶ್ರೀವ್ಯಾಸರಾಜಯತಿ ಕೃತ ಯಂತ್ರೋದ್ಧಾರಕ ಪ್ರಾಣದೇವ ಸ್ತೋತ್ರಂ ಸಂಪೂರ್ಣಂI
IIಶ್ರೀಕೃಷ್ಣಾರ್ಪಣಮಸ್ತು II





http://www.youtube.com/watch?v=oyWaibj_rHI
( This is the video Link of Yantrodharaka Pranadevara devasthana In Hampi, Karnataka ,India.
One can see the glimpse of Yandtodharaka Pranadevaru
)

Bho yati varadrendra /ಭೋ ಯತಿ ವರದೇಂದ್ರ

ಭೋ ಯತಿ ವರದೇಂದ್ರ - ಶ್ರೀಗುರುರಾಯ ರಾಘವೇಂದ್ರ IIಪII

ಕಾಯೋ ಎನ್ನ ಶುಭಕಾಯ ಭಜಿಸುವೆನು
ಕಾಯೋ ಮಾಯತಮಕೆ ಚಂದ್ರಾ IIಅII

ಕಂಡ ಕಂಡ ಕಡೆಗೆ ತಿರುಗಿ - ಬೆಂಡಾದೆನೋ ಕೊನೆಗೆ
ಕಂಡ ಕಂಡವರ ಕೊಂಡಾಡುತ
ನಿಮ್ಮ ಕಂಡೆ ಕಟ್ಟ ಕಡೆಗೆ II೧II


ನೇಮವು ಎನಗೆಲ್ಲೀ ಇರುವುದು - ಕಾಮಾಧಮನಲ್ಲಿ
ಭೋ ಮಹಾಮಹಿಮನೆ ಪಾಮರ ನಾ
ನಿಮ್ಮ ನಾಮವೊಂದೆ ಬಲ್ಲೆ II೨II

ಮಂತ್ರವ ನಾನರಿಯೇ - ಶ್ರೀಮನ್ಮಂತ್ರಾಲಯ ಧೊರೆಯೆ
ಅಂತರಂಗದೊಳು ನಿಂತು ಪ್ರೇರಿಸುವ
ಅನಂತಾದ್ರೀಶ ನಾನರಿಯೆ II೩ II
Audio Link:
http://www.kannadaaudio.com/Songs/Devotional/EkeVrundaavanidi/Bhoyati.ram

Monday, August 3, 2009

Live Telecast of Aaradhna mahotsava 2009.

Etv kannada is telecasting Sri Raghavendra swamy aaradhna 2009.
plase see the information below and click on the link:http://www.srsmutt.org/.

Sunday, August 2, 2009

ಈಶ ನಿನ್ನ ಚರಣ ಭಜನೆ /Eeesha ninna charana Bhajane

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು
ದೋಷರಾಶಿ ನಾಶ ಮಾಡೋ ಶ್ರೀಶ ಕೇಶವ IIಪII

ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ II1 II

ಶೋಧಿಸೆನ್ನ ಭವದ ಕಲುಷ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನ ಬಾಧೆ ಬಿಡಿಸು ಮಾಧವII ೨II


ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ II೩II


ಭ್ರಷ್ಟನೆನಿಸ ಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೆ II೪ II


ಮೊದಲು ನಿನ್ನ ಪಾದ ಪೂಜೆ ಮುದದಿ ಮಾಡುವೆನೈ ನಾನು
ಹೃದಯದೊಳಗೆ ಹುದುಗಿಸಯ್ಯ ಮಧುಸೂಧನII ೫II

ಕವಿದುಕೊಂಡು ಇರುವ ಪಾಪ ಸವೆದು ಪೋಗುವಂತೆಮಾಡು
ಜವನ ಬಾಧೆಯನು ಬಿಡಿಸೋ ತ್ರಿವಿಕ್ರಮ II೬ II


ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂಥೆ
ನೆಮವೇನಗೆ ಪಾಲಿಸಯ್ಯ ಸ್ವಾಮಿ ವಾಮನ II೭II


ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ಒದಗುವಂತೆ
ಹೃದಯದಲ್ಲಿ ಸದನ ಮಾಡೋ ಮುದದಿ ಶ್ರೀಧರ II೮II



ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು

ಹುಸಿಗೆ ನೀನು ಹಾಕದಿರೋ ಹೃಷಿಕೇಶನೆ II೯ II



ಆಬ್ದೀಯೊಳಗೆ ಬಿದ್ದು ನಾನು ಒದ್ದು ಕೊಂಬೆನಯ್ಯ ಭವದಿ

ಗೆದ್ದು ಪೋಪ ಬುದ್ಧಿ ತೋರೋ ಪದ್ಮನಭಾನೆII ೧೦II



ಕಾಮ ಕ್ರೋಧ ಬಿಡಿಸಿ ನಿನ್ನ ನಾಮ ಜಿವ್ಹೆಯೊಳಗೆ ನುಡಿಸಿ

ಶ್ರೀ ಮಹಾನುಭಾವನಾದ ದಾಮೋದರ II೧೧ II



ಪಂಕಜಕ್ಷಾ ನೀನೆ ಎನ್ನ ಮಂಕು ಬುದ್ಧಿಯನ್ನು ಬಿಡಿಸಿ ನಿನ್ನ

ಕಿಂಕರನ ಮಾಡಿಕೊಳ್ಳೋ ಸಂಕರುಷಣ II೧೨II



ಏಸುಜನ್ಮ ಬಂದರೇನು ದಾಸನಗಲಿಲ್ಲ ನಾನು

ಗಾಸಿಮಾದದಿರೋ ಇನ್ನು ವಾಸುದೇವನೆ II೧೩II



ಬುದ್ಧಿಶೂನ್ಯನಾಗಿ ನಾನು ಕದ್ದುಕಳ್ಳನಾದೆ ಎನ್ನ

ತಿದ್ದಿ ಹೃದಯ ಶುದ್ಧಮಾಡೋ ಪ್ರದ್ಯುಮನಾನೆ II೧೪ II



ಜನನಿ ಜನಕ ನಿನ್ನೆಯೆಂದು ಎನುವೆನಯ್ಯ ದಿನಬಂದು

ಎನಗೆ ಮುಕ್ತಿ ಪಾಲಿಸಿಂದು ಅನಿರುದ್ದನೆ II೧೫II



ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡೋ ಪ್ರೇಮ

ಇರಿಸು ನಿನ್ನ ಚರಣದಲ್ಲಿ ಪುರುಷೋತ್ತಮ II೧೬II



ಸಾಧುಸಂಗ ಕೊಟ್ಟು ನಿನ್ನ ಪಾದ ಭಜಕನೆನಿಸು ಎನ್ನ

ಭೇದ ಮಾಡಿ ನೋಡದಿರೋ ಅಧೋಕ್ಷದ II೧೭ II



ಚಾರುಚರಣ ತೋರಿ ಎನಗೆ ಪಾರಗಾಣಿಸಯ್ಯ ಕೊನೆಗೆ

ಭಾರ ಹಾಕಿರುವೆ ನಿನಗೆ ನಾರಸಿಂಹನೆ II೧೮ II



ಸಂಚಿತಾರ್ಥ ಪಾಪಗಳನು ಕಿಂಚಿತಾದರಿಲ್ಲದಂತೆ

ಮುಂಚಿತಾಗಿ ಕಳೆಯಬೇಕು ಸ್ವಾಮಿ ಅಚ್ಯುತ್II ೧೯II



ಜ್ಞಾನ ಭಕುತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಎನ್ನ

ಹೀನ ಬುದ್ಧಿ ಬಿಡಿಸೋ ಮುನ್ನ ಜನಾರ್ಧನ II೨೦ II



ಜಪತಪಾನುಷಾಠ ನೀನು ವಪ್ಪುವಂತೆ ಮಾಡಲಿಲ್ಲ

ತಪ್ಪು ಕೋಟಿ ಕ್ಷಮಿಸಬೇಕು ಉಪೇಂದ್ರನೆ II೨೧II



ಮೋರೆಯ ಇಡುವೆನಯ್ಯ ನಿನಗೆ ಸೆರೆಯ ಬಿಡಿಸು ಭಾವದ ಎನಗೆ

ಇರಿಸು ಭಕ್ತರೊಳಗೆ ಪರಮ ಪುರುಷ ಶ್ರೀಹರಿII ೨೨II



ಪುಟ್ಟಿಸಬೇಡವೆನು ಪುಟ್ಟಿಸಿದಕೆ ಪಾಲಿಸೇನು

ಇಷ್ಟು ಬೇಡಿಕೊಂಬೆ ನಾನು ಶ್ರೀಕೃಷ್ಣ II೨೩II



ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವನ

ಅಥಿ೯ಯಿಂದ ಸಲಹುವನು ಕೃತ೯ ಕೇಶವ II೨೪II



ಮರೆತುಬಿಡದೆ ಹರಿಯನಾಮ ಬರೆದು ಓದಿ ಕೇಳಿದವರಿಗೆ

ಕರೆದು ಮುಕ್ತಿ ಕೊಡುವ ಬಾಡದಾದಿಕೇಶವ II೨೫ II