ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮಿವೆಂಕಟರಮಣಗಾರತಿ ಎತ್ತಿರೆ IIಪII
shreerayarublogspt
ಮತ್ಸ್ಯಾವತಾರಗೆ ಮ೦ದರೊದ್ಧಾರಗೆ ಅಚ್ಚರಿಯಿಂದ ಭೂಮಿ ತ೦ದವಗೆ
ಹೆಚ್ಚಾದ ಉಕ್ಕಿನ ಕ೦ಭದಿ೦ದಲಿ ಬಂದ ಲಕ್ಷ್ಮಿ ನರಸಿ೦ಹಗಾರತಿ ಎತ್ತಿರೆ II೧II
ವಾಮನ ರೂಪಲಿ ದಾನ ಬೇಡಿದವಗೆ ಪ್ರೇಮದಿ ಕೂಡ್ಲಿಯ ಪಿಡಿದವಗೆ
ರಾಮಚಂದ್ರನಾಗಿ ದಶಶಿರನನು ಕೊ೦ದ ಸ್ವಾಮಿ ಶ್ರೀಕೃಷ್ಣಗಾರತಿ ಎತ್ತಿರೆ II೨II
ಬತ್ತಲೆ ನಿ೦ತಗೆ ಬೌದ್ಧವತಾರಗೆ ಉತ್ತಮ ಅಶ್ವನೆರಿದಗೆ
ಭಕ್ತರ ಸಲಹುವ ಪುರಂದರವಿಠಲಗೆ ಮುತ್ತೈದೆಯರಾರತಿ ಎತ್ತಿರೆ II3II
Tumba ishta ee Aarathi Haadu. Kushi aitu nim blog li aarathi haadu nodi. Very nice blog. Loved your work.
ReplyDeleteThank You for visiting BLOG.
ReplyDelete