ಬಾರೆ ಭಾಗ್ಯದ ನಿಧಿಯೇ
ಕರವೀರ ನಿವಾಸಿನಿ ಸಿರಿಯೇ
ಬಾರೆ ಬಾರೆ ಕರವೀರ ನಿವಾಸಿನಿ
ಬಾರೆ ಬಾರೆಗು ಶುಭ ತೋರೆ ನಮ್ಮನಿಗೆ
ನಿಗಮವೆದ್ಯಳೆ ನೀನು ನಿನ್ನ
ಪೋಗಳಲಾಪೇನೆ ನಾನು
ಮಗನಪರಾಧವ ತೆಗೆದೇಣಿಸದಲೇ
ನ್ನಗವೆಣಿಯೆ ಲಗಬಗೆಯಿ೦ದಲಿ
ಲೋಕಮಾತೆಯೇ ನೀನು ನಿನ್ನ
ತೋಕನಲ್ಲವೇ ನಾನು
ಆಕಳು ಕರುವಿನ ಸ್ವೀಕರಿಸುವ ಪರಿ
ನೀ ಕರುಣದಿ ಕಾಲ್ಹಾಕು ನಮ್ಮನಿಗೆ
ಕಡೆಗೆ ನಮ್ಮನಿವಾಸ ಒಡೆಯನ೦ತಾದ್ರಿಶ
ಒಡೆಯನಿದ್ದಲ್ಲಿಗೆ ಮಡದಿ ಬಾಹುವುದು
ರೂಡಿಗುಚಿತವಿದು ನಡಿ ನಮ್ಮನಿಗೆ Audio Link:
ಹರಿದಿನ ಪಾತಕಪರಿಹಾರ ದಿವಿಜರ
ಕರುಣಕ್ಕೆ ಕಾರಣ ನ೦ಬೆಲೊ ಮನುಜ IIಪII
ಗಂಗೆ ಮೊದಲಾದ ತೀರ್ಥ೦ಗಳೇಣೆಯೇ ಶ್ರೀರಂಗ ಮೋದಲಾದ ಕ್ಷೇತ್ರವು ಸರಿಯೇ
ಉತ್ತು೦ಗ ಜಪತಪ ಹೋಮಗಳೆದುರೆ ಶ್ರೀರಂಗನಾಥನ ದಿನಕೋ೦ದುಪವಾಸಕೆ II೧II
ಹಿಂದೆ ಮಾಡಿದ ಪಾಪ ಪರಿಹಾರವು , ನೀನಿಂದು ಮಾಡುವ ಸುಕೃತ ಬೆಳೆಸು
ಮು೦ದಣ ಮುಕುತಿಗೆ ಕಲ್ಪಲತಾ೦ಕುರ ಇಂದಿರೇಶನ ದಿನಕೋ೦ದುಪವಾಸಕೆ II೨II
ರುಕುಮಾ೦ಗದ ಮೊದಲಾದ ಭಕುತರೆ ಸಕಲವ ಬಿಟ್ಟು ಏಕಾದಶಿವ್ರತವ
ಭಕುತಿಯಿ೦ ಕೂಡಿ ಶ್ರೀ ಕೃಷ್ಣ ನ ಮೆಚ್ಚಿಸಿ - ಮುಕುತಿ ಸೂರೆಗೂ೦ದರೆ೦ಬುದನರಿಯೇ II೩II